Thursday, May 7, 2015

ಯಾಕೆ ಮುಳುಗುತಿರುವೆ???

ಮುಳುಗುತಿರುವೆಯಾ ಭಾಸ್ಕರನೇ???
ಯಾಕೆ ನೀ ಕೆಂಪಗಾಗಿರುವೆ???
ಅನ್ಯಾಯದ ವಿಜಯಕೆ ಬೇಸರವೇ???
ಜೀವರಾಶಿಗಳ ನಡುವಣ ಮಾತ್ಸರ್ಯದ
ಜಗಳ ವೈಷಮ್ಯಗಳಿಗೆ ಕೋಪವೇ???

ಮನುಜ-ಮನುಜರ ನಡುವೆ ಭುಗಿಲೆದ್ದಿರುವ
ಶತ್ರುತ್ವಗಳ ಕದನಗಳಿಗೆ ದುಃಖವೇ???
ಸ್ವಾರ್ಥ - ಕ್ರೋಧ - ಲೋಭ - ದರ್ಪಗಳಂತಹ
ಕಾರ್ಮೋಡಗಳ ಆರ್ಭಟಕೆ ಭಯವೇ???

ಏಕೆ ನೀ ಮುಳುಗುತಿರುವೆ???
ಬಾಳಿಗೆ ಮುಸ್ಸಂಜೆಯ ಛಾಯೆಯನಿರಿಸಿ...
ಇರುಳಿನ ಕತ್ತಲೆಯನು ಒದಗಿಸಿ...
ಇನ್ನೆಂದೂ ಬೆಳಕ ಮೂಡಿಸದಂತೆ???

ಮರಳಿ ಬಾ ಭಾಸ್ಕರನೇ...
ನಿನ್ನ ಬರುವಿಕೆಗಾಗಿ ಕಾಯುತಿರುವೆ...
ಈ ಬಾಳಿಗೆ ಸೌಂದರ್ಯವ ಪಾಲಿಸಲು...
ಜೀವರಾಶಿಗಳಿಗೆ ಹೊಸ ಹರುಷ ಕರುಣಿಸಲು...

No comments:

Post a Comment