Saturday, July 20, 2024

ಜೀವನವೆಂಬ ಉದ್ಯಾನವನ


ನಿಮ್ಮ ಜೀವನವನ್ನು ವಿಶಾಲವಾದ, ಸುಂದರವಾದ ಉದ್ಯಾನವೆಂದು ಕಲ್ಪಿಸಿಕೊಳ್ಳಿ. ನೀವು ಹೊಂದಿರುವ ಪ್ರತಿಯೊಂದು ಗುರಿಯೂ  ನೀವು ಬೆಳೆಸಲು ಬಯಸುವ ಅನನ್ಯ ಹಾಗೂ ರೋಮಾಂಚಕವಾದ  ಹೂವಿನ ಗಿಡವಾಗಿದೆ. . ಕೆಲವು ಹೂವುಗಳು ವೈಯಕ್ತಿಕ ಬೆಳವಣಿಗೆಯನ್ನು ಪ್ರತಿನಿಧಿಸುತ್ತವೆ, ಮತ್ತೆ ಉಳಿದ ಹೂವುಗಳು ವೃತ್ತಿಜೀವನದ ಮೈಲಿಗಲ್ಲುಗಳು, ಸಂಬಂಧಗಳು ಅಥವಾ ಹವ್ಯಾಸಗಳನ್ನು ಸಂಕೇತಿಸುತ್ತವೆ. ಈಗ, ಈ ಹೂವುಗಳನ್ನು ಪೋಷಿಸಲು ಹಣವು ನೀರು ಎಂದು ಊಹಿಸಿ.

ನೀವು ಕೇಳಬಹುದು, ಹೂವುಗಳ ಅದ್ಭುತ ಶ್ರೇಣಿಯನ್ನು ಹೊಂದುವುದು  - ಅಂದರೆ ನಿಮ್ಮ ಗುರಿಗಳನ್ನು ಸಾಧಿಸುವುದು ಮುಖ್ಯವೋ? ಅಥವಾ ಅಂತ್ಯವಿಲ್ಲದ ನೀರಿನ ಪೂರೈಕೆ - ಅಂದರೆ ಮಿತಿ ಇಲ್ಲದ ಹಣವನ್ನು ಗಳಿಸುವುದು ಹೆಚ್ಚು ಮುಖ್ಯವೋ?. ಇದರ ಬಗ್ಗೆ ಯೋಚಿಸಿದರೆ ನಿಮಗೇನನ್ನಿಸುತ್ತದೆ?

ನೀವು ನೀರನ್ನು ಸಂಗ್ರಹಿಸುವುದರ ಮೇಲೆ ಮಾತ್ರ ಗಮನಹರಿಸಿದರೆ, ನೀವು ಚೆನ್ನಾಗಿ ಸಂಗ್ರಹವಾಗಿರುವ ಜಲಾಶಯದೊಂದಿಗೆ ಕೊನೆಗೊಳ್ಳಬಹುದು ಆದರೆ ಉದ್ಯಾನವನ ಖಾಲಿ ಆಗಿರಬಹುದು. ಆಗ ಹೂಗಳೇ ಇಲ್ಲದ  ಉದ್ಯಾನವನ ಹೊಂದಿದರೆ ಏನು ಚೆನ್ನ? ವ್ಯತಿರಿಕ್ತವಾಗಿ, ನೀರನ್ನು ಪರಿಗಣಿಸದೆ ನಿಮ್ಮ ಹೂವುಗಳ ಮೇಲೆ ಮಾತ್ರ ನೀವು ಗಮನಹರಿಸಿದರೆ, ಅರಳುವ ಮೊದಲೇ ಆ ಹೂಗಳು ಒಣಗಬಹುದು. ಉದ್ಯಾನವನದಲ್ಲಿ ಒಣಗಿರುವ ಹೂಗಳು ಏನು ಚೆನ್ನ?

ಹೀಗಿರುವಾಗ, ಜೀವನದ್ದಲ್ಲಿ ಸಮತೋಲನವನ್ನು ಕಂಡುಕೊಳ್ಳುವುದರಲ್ಲಿ ಮಾತ್ರ ನಿಜವಾದ ಸೌಂದರ್ಯ ಅಡಗಿದೆ. ನಿಮ್ಮ ಉದ್ಯಾನವನ್ನು ಅಂದರೆ ಗುರಿಗಳನ್ನು ಪೋಷಿಸಲು ಮತ್ತು ಬೆಳೆಸಲು ಆ ನೀರು ಅಂದರೆ ಹಣವನ್ನು ಸಂಪನ್ಮೂಲವಾಗಿ ಬಳಸಿ. ಯಾವ ಹೂವುಗಳಿಗೆ ಹೆಚ್ಚು ಗಮನ ಬೇಕು ಮತ್ತು ಅವುಗಳಿಗೆ ಎಷ್ಟು ನೀರು ಬೇಕು ಎಂಬುದನ್ನು ಅರ್ಥಮಾಡಿಕೊಳ್ಳಲು ನಿಮ್ಮ ಗುರಿಗಳಿಗೆ ಆದ್ಯತೆ ನೀಡಿ. ಈ ರೀತಿಯಾಗಿ, ನಿಮ್ಮ ಉದ್ಯಾನವನವು ಅಭಿವೃದ್ಧಿ ಹೊಂದುತ್ತದೆ, ವೈಯಕ್ತಿಕ ಸಾಧನೆಗಳು ಮತ್ತು ಅವುಗಳನ್ನು ಬೆಂಬಲಿಸುವ ವಿಧಾನಗಳಿಂದ ತುಂಬಿದ ಶ್ರೀಮಂತ ಮತ್ತು ಪೂರೈಸುವ ಜೀವನವನ್ನು ನೀಡುತ್ತದೆ. ಇದನ್ನು ತಡೆಯಲು ಖಂಡಿತ ಸಾಧ್ಯವಾಗದ ಮಾತು. 

ಮೂಲಭೂತವಾಗಿ, ಒಂದರ ಬದಲಿಗೆ ಇನ್ನೊಂದನ್ನು ಆರಿಸಲು ಇದು ಆಯ್ಕೆಯ ಮಾತಲ್ಲ. ನಿಮ್ಮ ಗುರಿಗಳನ್ನು ಸಾಧಿಸುವುದು ನಿಮ್ಮ ಜೀವನಕ್ಕೆ ಅರ್ಥ ಮತ್ತು ಉದ್ದೇಶವನ್ನು ನೀಡುತ್ತದೆ, ಆದರೆ ಹಣವನ್ನು ಗಳಿಸುವುದು ಆ ಗುರಿಗಳನ್ನು ಪೋಷಿಸಲು ಅಗತ್ಯವಿರುವ ಭದ್ರತೆ ಮತ್ತು ಸಂಪನ್ಮೂಲಗಳನ್ನು ಒದಗಿಸುತ್ತದೆ. ಒಂದಿಲ್ಲದಿದ್ದರೆ ಇನ್ನೊಂದು ನಿಮಗೆ ಅಪೂರ್ಣ ಅನಿಸಬಹುದು. ನಿಮ್ಮ ಉದ್ಯಾನವನ್ನು ಬುದ್ಧಿವಂತಿಕೆಯಿಂದ ನೋಡಿಕೊಳ್ಳಿ. ನಿಮ್ಮ ಗುರಿಗಳನ್ನು ಉತ್ಸಾಹ ಮತ್ತು ಪರಿಶ್ರಮದಿಂದ ಪೋಷಿಸಿ ಮತ್ತು ನಿಮ್ಮ ಪ್ರಯಾಣವನ್ನು ಬೆಂಬಲಿಸಲು ಆರ್ಥಿಕ ಸ್ಥಿರತೆಯನ್ನು ಬೆಳೆಸಿಕೊಳ್ಳಿ. ನಿಮ್ಮ ಗುರಿಗಳನ್ನು ಅರಿತುಕೊಳ್ಳಲು ಮತ್ತು ಉಳಿಸಿಕೊಳ್ಳಲು ಸಹಾಯ ಮಾಡುವ ಸಾಧನವಾಗಿ ಹಣವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿರುತ್ತದೆ. ಹೂವುಗಳು ಮತ್ತು ನೀರಿನ ಸರಿಯಾದ ಸಮತೋಲನದೊಂದಿಗೆ ಸುಸಜ್ಜಿತವಾದ ಉದ್ಯಾನವನವು ಸುಂದರ ಮತ್ತು ಸಮರ್ಥನೀಯವಾಗಿರುತ್ತದೆ. ಈ ಸಾಮರಸ್ಯದ ವಿಧಾನವು ನಿಮಗೆ ಎರಡೂ ಪ್ರಪಂಚಗಳಲ್ಲಿ ಅತ್ಯುತ್ತಮವಾದದ್ದನ್ನು ಆನಂದಿಸಲು ಅನುವು ಮಾಡಿಕೊಡುತ್ತದೆ, ಇದು ಪೂರೈಸುವ ಮತ್ತು ಸುರಕ್ಷಿತವಾದ ಜೀವನವನ್ನು ರಚಿಸುತ್ತದೆ. ಇದನ್ನು ಅರಿತುಕೊಂಡು ಸುಂದರವಾದ ಉದ್ಯಾನವನವನ್ನು ನಿಮ್ಮದಾಗಿಸಿಕೊಳ್ಳಿ.

- ದೀಪಲಕ್ಷ್ಮಿ ಭಟ್ , ಮಂಗಳೂರು

Sunday, February 25, 2024

ಮಮತೆಯ ಮಡಿಲು

ಹಳಿದರವಳನು ಬಂಜೆ ಎಂದು
ಅರಿಯದಾದರವಳ ತಾಯಿ ಹೃದಯವನು
ಕೇಳದಾದರವಳ ನೋವ ತುಡಿತವನು
ಸಾಯಿ ನೀನೆಂದು ಹಳಿದರವಳನು.

ಕಂಗಳಲಿ ಕಾಣದಾದರವಳ ವೇದನೆಯನು
ಆ ವೇದನೆಯಲಿರುವವಳ ಸಂಕಟವನು
ಹಿಂದಿನಿಂದ ಹೀಯಾಳಿಸಿದರವಳನು
ಎದುರಿನಲೇ ಧೂಷಿಸಿದರವಳನು.

ಕೇಳಿದ್ದರೆ ಅವಳ ಮನದ ಬೇಗುದಿಯನು
ತೆರೆದಿಡುತಿದ್ದಳು ಅವಳ ಹೃದಯಕದವನು
ಭಾವಕೆ ಸ್ಪಂದಿಸುವ ತಾಯಂತರಾಳವನು
ತಿಳಿದಿರುತಿದ್ದೀರವಳ ಅಂತರಾಳದ ನೋವನು.

ಒಬ್ಬಂಟಿಯಾಗಿ ಸಾಯುತಿರುವವಳ  ಚೇತನವನು
ಹಳಿದು ನೋಯಿಸಬೇಡ ನೀನವಳ ಹೃದಯವನು
ಖುಷಿಯಲಿರಲಿ ಬಿಡು ನೋಡುತ ಪರ ಮಕ್ಕಳನು
ತಂಪಿಸಲಿ ಅವಳ ಮಮತೆಯ ಭಂಡಾರವನು.

Thursday, February 23, 2023

ಅಪ್ಪನಿಗೊಂದು ಪತ್ರ

 

ಪಿತಾ ಸ್ವರ್ಗಃ ಪಿತಾ ಧರ್ಮಃ ಪಿತಾ ಪರಮಕಂ ತಪಃ ।

ಪಿತರಿ ಪ್ರೀತಿಮಾಪನ್ನೇ ಸರ್ವಾಃ ಪ್ರೀಯಂತಿ ದೇವತಾಃ ।। 

ನನ್ನ ಪ್ರೀತಿಯ ಅಪ್ಪ,

ಪುಟ್ಟ ಕಂದನಾಗಿ ನಿಮ್ಮ ಬಾಳಿಗೆ ಬಂದಾಗ ನಾನು, ಅತಿಯಾಗಿ ಆನಂದ ಪಟ್ಟವರೇ ನೀವು ಎಂದು ನಾನು ಬಲ್ಲೆ. ನಿಮ್ಮ ಮುದ್ದಿನಿಂದ ಬೆಳೆದ ನಾನು ಕಂಡ ಧೀರ ಮಹಾಪುರುಷ, ಇಂದಿಗೂ ನನಗೆ ಆಧಾರ ಸ್ಥಂಭದಂತೆ ನನ್ನ ಸಂರಕ್ಷಣೆಗೆ ನಿಲ್ಲುವ ಯೋಧ ನೀವೇ. 

ನಿಮ್ಮೊಂದಿಗೆ ಕಳೆದ ಸುಕ್ಷಣಗಳು ನನಗೆ ಜೀವನದುದ್ದಕ್ಕೂ ಮಾದರಿಯಾಗಿ ನೆರವಾಗುವುದು ಖಂಡಿತವಾದ ವಿಚಾರ. ಚಿಕ್ಕವಳಾಗಿದ್ದಾಗ ನಿಮ್ಮ ಬೆಚ್ಚಗಿನ ಹೊದಿಕೆಯೊಳಗೆ ನುಸುಳುತ್ತಿದ್ದ ನನಗೆ ಸುರಕ್ಷಿತವಾಗಿರುವ ಭಾವನೆ. ದಾರಿಯುದ್ದಕ್ಕೂ ನಡೆಯುತ್ತಿರುವಾಗ ನಿಮ್ಮ ಗಟ್ಟಿಯಾದ ಕೈಹಿಡಿತ, ನಾನೇ ರಾಜಕುಮಾರಿ ಅನ್ನುವಂಥ ಭಾವನೆ. ನೀವು ಕಚೇರಿಯಿಂದ ಮರಳುವುದನ್ನೇ ಕಾಯುತ್ತಿದ್ದ ನಾನು, ಅಮ್ಮ ಕೊಡುತ್ತಿದ್ದ ಕೈ ತುತ್ತಿನ ಊಟ ಮುಗಿಸಿ ನಿಮ್ಮ ಕಾಲಿನ ಮೇಲೆ ಖುಷಿಯಾಗಿ ಸುಖವಾದ  ನಿದ್ದೆಗೆ ಜಾರಿದಾಗ ಅದೃಷ್ಟವಂತೆ ಎನ್ನುವ ಭಾವನೆ.

ನನ್ನ ಜೊತೆ ನನ್ನ ವಯಸ್ಸಿನ ಅದೆಷ್ಟೋ ಮಕ್ಕಳಿಗೆ ಆಂಗ್ಲಮಾಧ್ಯಮ ಶಾಲೆ ಮಿಲಿಯಗಟ್ಟಲೆ ದೂರ ಎಂಬುದನ್ನು ತಿಳಿದು, ನೀವು ಹಲವಾರು ಮಹನೀಯರ ಜೊತೆ ಸೇರಿ ಆಂಗ್ಲಮಾಧ್ಯಮ ಶಾಲೆಯೊಂದನ್ನು ನಮ್ಮ ಊರಿನಲ್ಲೇ ಶುರು ಮಾಡಿದಾಗ, ಆ ಶಾಲೆ ನಡೆಸಲು ಜಾಗ ಸಿಗದಾಗ, ನಮ್ಮ ಮನೆಯ ಒಂದು ಭಾಗದಲ್ಲೇ ಶುರು ಮಾಡಿ, ಆಮೇಲೆ ಶಾಲೆಯ ಸ್ವಂತ ಕಟ್ಟಡ ಕಟ್ಟಿಸಲೆಂದು ನಿಮ್ಮ ಪಾಲಿನ ಜಾಗದ ಅಸ್ತಿಯನ್ನೇ ಶಾಲೆಗೆಂದು ದಾನ ಮಾಡಿದಾಗ, ಆ ಶಾಲೆಯಲ್ಲಿ ನಾನು ಕಲಿಯುತ್ತಿರುವಾಗ ನನಗಾಗುತ್ತಿದ್ದ ಹೆಮ್ಮೆ ವರ್ಣಿಸಲಸಾಧ್ಯ.

ನನಗೆ ನನ್ನ ಅಪ್ಪ ಖಂಡಿತವಾಗಿಯೂ ಮಹಾಪುರುಷನೇ. 

ನಿಮ್ಮ ಪುಟ್ಟ ಕಂದ ಇಂತಿ 





ಪಿತಾ ಸ್ವರ್ಗಃ ಪಿತಾ ಧರ್ಮಃ ಪಿತಾ ಪರಮಕಂ ತಪಃ ।

ಪಿತರಿ ಪ್ರೀತಿಮಾಪನ್ನೇ ಸರ್ವಾಃ ಪ್ರೀಯಂತಿ ದೇವತಾಃ ।। 

ಪ್ರೀತಿಯ ಅಪ್ಪ,

ಪುಟ್ಟ ಕಂದನಾಗಿ ನಿಮ್ಮ ಬಾಳಿಗೆ ಬಂದಾಗ ನಾನು, ಅತಿಯಾಗಿ ಆನಂದ ಪಟ್ಟವರೇ ನೀವು ಎಂದು ನಾನು ಬಲ್ಲೆ. ನಿಮ್ಮ ಮುದ್ದಿನಿಂದ ಬೆಳೆದ ನಾನು ಕಂಡ ಧೀರ ಮಹಾಪುರುಷ, ಇಂದಿಗೂ ನನಗೆ ಆಧಾರಸ್ಥಂಭದಂತೆ ನನ್ನ ಸಂರಕ್ಷಣೆಗೆ ನಿಲ್ಲುವ ಯೋಧ ನೀವೇ. 

ನಿಮ್ಮೊಂದಿಗೆ ಕಳೆದ ಸುಕ್ಷಣಗಳು ಜೀವನದುದ್ದಕ್ಕೂ ನನಗೆ ಮಾದರಿಯಾಗಿ ನೆರವಾಗುವುದು ಖಂಡಿತವಾದ ವಿಚಾರ. ಚಿಕ್ಕವಳಾಗಿದ್ದಾಗ ನಿಮ್ಮ ಬೆಚ್ಚಗಿನ ಹೊದಿಕೆಯೊಳಗೆ ನುಸುಳುತ್ತಿದ್ದ ನನಗೆ ಸುರಕ್ಷಿತವಾಗಿರುವ ಭಾವನೆ. ದಾರಿಯುದ್ದಕ್ಕೂ ನಡೆಯುತ್ತಿರುವಾಗ ನಿಮ್ಮ ಗಟ್ಟಿಯಾದ ಕೈಹಿಡಿತ, ನಾನೇ ರಾಜಕುಮಾರಿ ಅನ್ನುವಂಥ ಭಾವನೆ. ನೀವು ಕಚೇರಿಯಿಂದ ಮರಳುವುದನ್ನೇ ಕಾಯುತ್ತಿದ್ದ ನಾನು, ನಿಮ್ಮ ಕಾಲಿನ ಮೇಲೆ ಸುಖವಾದ  ನಿದ್ದೆಗೆ ಜಾರಿದಾಗ ನಾನೇ ಅದೃಷ್ಟವಂತೆ ಎನ್ನುವ ಭಾವನೆ. ನೀವೇ ಭೂದಾನ ಮಾಡಿ ಶುರುಮಾಡಿದ ಶಾಲೆಯಲ್ಲಿ ಕಲಿಯುತ್ತಿರುವಾಗ ನನಗಾಗುತ್ತಿದ್ದ ಹೆಮ್ಮೆ ವರ್ಣಿಸಲಸಾಧ್ಯ.

ನನ್ನ ಅಪ್ಪ ಖಂಡಿತವಾಗಿಯೂ ಮಹಾಪುರುಷನೇ. 

ಇಂತಿ ನಿಮ್ಮ ಪುಟ್ಟ ಕಂದ.

Saturday, July 23, 2022

ತುಳಸೀ ಗಿಡ ಒಣಗುವುದಕ್ಕೆ ಮುಖ್ಯ ಕಾರಣಗಳು‌...

ತುಳಸೀ ಗಿಡ ಒಣಗುವುದಕ್ಕೆ ಮುಖ್ಯ ಕಾರಣಗಳು‌...

🙏೧. ಕುಂಡದಲ್ಲಿ ಹಾಕಿದರೆ ಅಷ್ಟು ಬೆಳವಣಿಗೆ ಆಗುವುದಿಲ್ಲ, ಬೇರು ಬಿಡುವುದಕ್ಕೆ ಸ್ಥಳಾವಕಾಶ ಕಮ್ಮಿ ಇರುತ್ತೆ..
🙏೨. ತುಳಸೀ ಗಿಡವನ್ನು ಸ್ನಾನ ಮಾಡದೇ ಮುಟ್ಟಿದರೆ, ಮೈಲಿಗೆ ಇರುವಾಗ ಬಿಡಿಸಿದರೆ, ಮೈಲಿಗೆ ಇರುವವರು ಮುಟ್ಟಿದರೆ, ಬೇಗ ಒಣಗುವುದು..
🙏೩. ತುಳಸಿಯನ್ನು ಉಗುರಿನಿಂದ ಕಿತ್ತರೆ, ಊಟದ ನಂತರ ಪೂಜಿಸುವ ಗಿಡದಿಂದ ತುಳಸಿ ಕಿತ್ತರೆ ಬೇಗ ಒಣಗುತ್ತದೆ..
🙏೪. ಅಶುಚಿಯಾದ ನೀರನ್ನು, ಮಡಿಯಿಲ್ಲದ ನೀರನ್ನು ಹಾಕಿದರೂ ತುಳಸೀಗಿಡ ಒಣಗುವುದು..
🙏೫. ತುಳಸೀ ಗಿಡಕ್ಕೆ ಗಿಡ ಬೆಳೆದ ಹಾಗೇ ಬೇರೆ ಮಣ್ಣನ್ನು ಹಾಕುತ್ತಿರಬೇಕು, ಇಲ್ಲದಿದ್ದರೆ ಫಲವತ್ತತೆ ಇಲ್ಲದೇ ಬೇಗ ಒಣಗುವುದು..
🙏೬. ತುಂಬಾ ತುಳಸೀ ಗಿಡ ಒಣಗುತ್ತಿದ್ದರೆ ಮೃತ್ತಿಕೆಯನ್ನು ತಂದು ತುಳಸೀ ಗಿಡದಲ್ಲಿ ಹಾಕಿ , ಚೆನ್ನಾಗಿ ಬೆಳೆಯುವುದು..
🙏೭. ಮನೆಯ ಮೇಲೆ ದುಷ್ಟಗ್ರಹ ಪ್ರಭಾವ ಬಿದ್ದಾಗ, ಮಾಟ ಮಂತ್ರ ದೋಷವಾದಾಗ , ಅದನ್ನು ತುಳಸೀ ತಡೆಯುವುದು..ಕೆಲವೊಂದು ಅಹಿತಕರ ಸನ್ನಿವೇಶದಿಂದ ನಿಮ್ಮನ್ನು ರಕ್ಷಿಸುವ ಸಮಯದಲ್ಲಿ ತುಳಸೀ ಒಣಗುವುದು ಉಂಟು..ಇದು ಎಚ್ಚರಿಕೆಯ ಸಂದೇಷವೂ ಕೂಡ..
🙏೮. ಪ್ರತಿದಿನ ತುಳಸೀ ನೀರನ್ನು ಕುಡಿಯುವುದರಿಂದ ಮಾಟ ಮಂತ್ರ ತಟ್ಟುವುದಿಲ್ಲ..
🙏೯. ತುಳಸೀಗಿಡದ ಮುಂದೆ ಪ್ರತಿದಿನ ದೀಪ ಹಚ್ಚುವುದರಿಂದ ದುಷ್ಟಶಕ್ತಿಗಳು ಮನೆಯನ್ನು ಪ್ರವೇಶ ಮಾಡುವುದಿಲ್ಲ, ನೆಲ್ಲಿಕಾಯಿ ದೀಪ ಹಚ್ಚುವುದರಿಂದ ಲಕ್ಷ್ಮೀಕಟಾಕ್ಷವಾಗುವುದು..
🙏೧೦. ತುಳಸೀ ಪೂಜೆಯನ್ನು ಪೂರ್ವ ಅಥವಾ ಉತ್ತರಾಭಿಮುಖವಾಗಿ ಮಾಡುವುದು ಶುಭ, ಉತ್ತರ ಅಥವಾ ಈಶಾನ್ಯ ಅಭಿಮುಖವಾಗಿ ಮಾಡುವುದು ಅತ್ಯಂತ ಶುಭ..
🙏೧೧. ತುಳಸೀ ಬಿಡಿಸುವಾಗ ವಿಷ್ಣುಪರಮಾತ್ಮರ ಕ್ಷಮೆ ಕೋರಿ, ಗಿಡವನ್ನು ಅಲ್ಲಾಡಿಸಿ, ಒಣಗಿದ ಎಲೆಯಲ್ಲಾ ಉದುರಿದ ನಂತರ ತುಳಸಿಯನ್ನು ಬಿಡಿಸಿ..
ನೀವು ತುಳಸೀ ಬಿಡಿಸುವಾಗ ತುಳಸಿ ನೆಲಕ್ಕೆ ಬಿದ್ದರೆ "ಬ್ರಹ್ಮಹತ್ಯಾ" ದೋಷ ಬರುವುದು..
ನೆಲಕ್ಕೆ ಬಿದ್ದ ತುಳಸೀ ಪೂಜಿಸಬಾರದು.

(ಸಂಗ್ರಹ)

Saturday, July 9, 2022

ನಾಮ ರಾಮಾಯಣ

ರಾಮಾಯಣವು  ಮಹರ್ಷಿ ವಾಲ್ಮೀಕಿ ಬರೆದ ಮಹಾ ಗ್ರಂಥ. ಈ ರಾಮಾಯಣ ೨೪೦೦೦ ಶ್ಲೋಕಗಳನ್ನೊಳಗೊಂಡು, ೭ ಪುಸ್ತಕಗಳಾಗಿ ವಿಭಜನೆ ಮಾಡಲಾಗಿದೆ. ಈ ರಾಮಾಯಣವನ್ನು ಒಂದೇ ಸಲಕ್ಕೆ ಓದಿ ಮುಗಿಸಲು ಅಸಾಧ್ಯವಾದ ಮಾತು. ಹೀಗಾಗಿ, ರಾಮಾಯಣದ ಶ್ಲೋಕವನ್ನು ಚಿಕ್ಕದಾಗಿ ಮಹರ್ಷಿ ವಾಲ್ಮೀಕಿ ಅವರು ೧೦೮ ಶ್ಲೋಕಗಳ ನಾಮ ರಾಮಾಯಣ ಎಂಬುದಾಗಿ ರಚಿಸಿದ್ದಾರೆ. ಇದು ಸಂಪೂರ್ಣ ರಾಮಾಯಣದ ಹಾಗೆಯೇ ಶ್ರೀ ರಾಮ ದೇವರ  ಎಲ್ಲ ಕಥೆಗಳನ್ನು ೧೦೮ ನಾಮದಲ್ಲಿ ವರ್ಣಿಸಿ ರಚಿಸಲಾಗಿದೆ. ಇದನ್ನು ಏಕಶ್ಲೋಕೀ ರಾಮಾಯಣ ಎಂದೂ ಕರೆಯುತ್ತಾರೆ. ಈ ಶ್ಲೋಕವನ್ನು ೭ ಭಾಗಗಳಾಗಿ ವಿಂಗಡಿಸಲಾಗಿದೆ - ಬಾಲಕಾಂಡ, ಅಯೋಧ್ಯಾಕಾಂಡ, ಅರಣ್ಯಕಾಂಡ, ಕಿಷ್ಕಿಂಧಾಕಾಂಡ, ಸುಂದರಕಾಂಡ, ಯುದ್ಧ ಕಾಂಡ, ಉತ್ತರಕಾಂಡ. 


 ॥ ನಾಮರಾಮಾಯಣ ॥
॥ ಬಾಲಕಾಂಡಃ ॥


ಶುದ್ಧಬ್ರಹ್ಮಪರಾತ್ಪರ ರಾಮ ।
ಕಾಲಾತ್ಮಕಪರಮೇಶ್ವರ ರಾಮ ।
ಶೇಷತಲ್ಪಸುಖನಿದ್ರಿತ ರಾಮ ।
ಬ್ರಹ್ಮಾದ್ಯಮರಪ್ರಾರ್ಥಿತ ರಾಮ ।

ಚಂಡಕಿರಣಕುಲಮಂಡನ ರಾಮ ।
ಶ್ರೀಮದ್ದಶರಥನನ್ದನ ರಾಮ ।
ಕೌಸಲ್ಯಾಸುಖವರ್ಧನ ರಾಮ ।
ವಿಶ್ವಾಮಿತ್ರಪ್ರಿಯಧನ ರಾಮ ।

ಘೋರತಾಟಕಾಘಾತಕ ರಾಮ ।
ಮಾರೀಚಾದಿನಿಪಾತಕ ರಾಮ ।
ಕೌಶಿಕಮಖಸಂರಕ್ಷಕ ರಾಮ ।
ಶ್ರೀಮದಹಲ್ಯೋದ್ಧಾರಕ ರಾಮ ।

ಗೌತಮಮುನಿಸಮ್ಪೂಜಿತ ರಾಮ ।
ಸುರಮುನಿವರಗಣಸಂಸ್ತುತ ರಾಮ ।
ನಾವಿಕಧಾವಿಕಮೃದುಪದ ರಾಮ ।
ಮಿಥಿಲಾಪುರಜನಮೋಹಕ ರಾಮ ।

ವಿದೇಹಮಾನಸರಂಜಕ ರಾಮ ।
ತ್ರ್ಯಂಬಕಕಾರ್ಮುಖಭಂಜಕ ರಾಮ ।
ಸೀತಾರ್ಪಿತವರಮಾಲಿಕ ರಾಮ ।
ಕೃತವೈವಾಹಿಕಕೌತುಕ ರಾಮ ।

ಭಾರ್ಗವದರ್ಪವಿನಾಶಕ ರಾಮ ।
ಶ್ರೀಮದಯೋಧ್ಯಾಪಾಲಕ ರಾಮ ॥

ರಾಮ ರಾಮ ಜಯ ರಾಜಾ ರಾಮ ।
ರಾಮ ರಾಮ ಜಯ ಸೀತಾ ರಾಮ ॥

 

 


 ॥ ಅಯೋಧ್ಯಾಕಾಂಡಃ ॥

ಅಗಣಿತಗುಣಗಣಭೂಷಿತ ರಾಮ ।
ಅವನೀತನಯಾಕಾಮಿತ ರಾಮ ।
ರಾಕಾಚನ್ದ್ರಸಮಾನನ ರಾಮ ।
ಪಿತೃವಾಕ್ಯಾಶ್ರಿತಕಾನನ ರಾಮ ।

ಪ್ರಿಯಗುಹವಿನಿವೇದಿತಪದ ರಾಮ ।
ತತ್ಕ್ಷಾಲಿತನಿಜಮೃದುಪದ ರಾಮ ।
ಭರದ್ವಾಜಮುಖಾನನ್ದಕ ರಾಮ ।
ಚಿತ್ರಕೂಟಾದ್ರಿನಿಕೇತನ ರಾಮ ।

ದಶರಥಸನ್ತತಚಿನ್ತಿತ ರಾಮ ।
ಕೈಕೇಯೀತನಯಾರ್ಪಿತ ರಾಮ ।
ವಿರಚಿತನಿಜಪಿತೃಕರ್ಮಕ ರಾಮ ।
ಭರತಾರ್ಪಿತನಿಜಪಾದುಕ ರಾಮ ॥
 
ರಾಮ ರಾಮ ಜಯ ರಾಜಾ ರಾಮ ।
ರಾಮ ರಾಮ ಜಯ ಸೀತಾ ರಾಮ ॥

 

 

॥ ಅರಣ್ಯಕಾಂಡಃ ॥

ದಂಡಕಾವನಜನಪಾವನ ರಾಮ ।
ದುಷ್ಟವಿರಾಧವಿನಾಶನ ರಾಮ ।
ಶರಭಂಗಸುತೀಕ್ಷ್ಣಾರ್ಚಿತ ರಾಮ ।
ಅಗಸ್ತ್ಯಾನುಗ್ರಹವರ್ದಿತ ರಾಮ ।

ಗೃಧ್ರಾಧಿಪಸಂಸೇವಿತ ರಾಮ ।
ಪಂಚವಟೀತಟಸುಸ್ಥಿತ ರಾಮ ।
ಶೂರ್ಪಣಖಾರ್ತ್ತಿವಿಧಾಯಕ ರಾಮ ।
ಖರದೂಷಣಮುಖಸೂದಕ ರಾಮ ।

ಸೀತಾಪ್ರಿಯಹರಿಣಾನುಗ ರಾಮ ।
ಮಾರೀಚಾರ್ತಿಕೃತಾಶುಗ ರಾಮ ।
ವಿನಷ್ಟಸೀತಾನ್ವೇಷಕ ರಾಮ ।
ಗೃಧ್ರಾಧಿಪಗತಿದಾಯಕ ರಾಮ ।

ಶಬರೀದತ್ತಫಲಾಶನ ರಾಮ ।
ಕಬನ್ಧಬಾಹುಚ್ಛೇದನ ರಾಮ ॥

ರಾಮ ರಾಮ ಜಯ ರಾಜಾ ರಾಮ ।
ರಾಮ ರಾಮ ಜಯ ಸೀತಾ ರಾಮ ॥


॥ ಕಿಷ್ಕಿಂಧಾಕಾಂಡಃ ॥

ಹನುಮತ್ಸೇವಿತನಿಜಪದ ರಾಮ ।
ನತಸುಗ್ರೀವಾಭೀಷ್ಟದ ರಾಮ ।
ಗರ್ವಿತವಾಲಿಸಂಹಾರಕ ರಾಮ ।
ವಾನರದೂತಪ್ರೇಷಕ ರಾಮ ।

ಹಿತಕರಲಕ್ಷ್ಮಣಸಂಯುತ ರಾಮ ।
ರಾಮ ರಾಮ ಜಯ ರಾಜಾ ರಾಮ ।
ರಾಮ ರಾಮ ಜಯ ಸೀತಾ ರಾಮ ।



॥ ಸುಂದರಕಾಂಡಃ ॥

ಕಪಿವರಸನ್ತತಸಂಸ್ಮೃತ ರಾಮ ।
ತದ್ಗತಿವಿಘ್ನಧ್ವಂಸಕ ರಾಮ ।
ಸೀತಾಪ್ರಾಣಾಧಾರಕ ರಾಮ ।
ದುಷ್ಟದಶಾನನದೂಷಿತ ರಾಮ ।

ಶಿಷ್ಟಹನೂಮದ್ಭೂಷಿತ ರಾಮ ।
ಸೀತವೇದಿತಕಾಕಾವನ ರಾಮ ॥
ಕೃತಚೂಡಾಮಣಿದರ್ಶನ ರಾಮ ।
ಕಪಿವರವಚನಾಶ್ವಾಸಿತ ರಾಮ ॥

ರಾಮ ರಾಮ ಜಯ ರಾಜಾ ರಾಮ ।
ರಾಮ ರಾಮ ಜಯ ಸೀತಾ ರಾಮ ॥


॥ ಯುದ್ಧಕಾಂಡಃ ॥

ರಾವಣನಿಧನಪ್ರಸ್ಥಿತ ರಾಮ ।
ವಾನರಸೈನ್ಯಸಮಾವೃತ ರಾಮ ।
ಶೋಷಿತಶರದೀಶಾರ್ತ್ತಿತ ರಾಮ ।
ವಿಭೀಷ್ಣಾಭಯದಾಯಕ ರಾಮ ।

ಪರ್ವತಸೇತುನಿಬನ್ಧಕ ರಾಮ ।
ಕುಮ್ಭಕರ್ಣಶಿರಶ್ಛೇದನ ರಾಮ ।
ರಾಕ್ಷಸಸಂಘವಿಮರ್ಧಕ ರಾಮ ।
ಅಹಿಮಹಿರಾವಣಚಾರಣ ರಾಮ ।

ಸಂಹೃತದಶಮುಖರಾವಣ ರಾಮ ।
ವಿಧಿಭವಮುಖಸುರಸಂಸ್ತುತ ರಾಮ ।
ಖಃಸ್ಥಿತದಶರಥವೀಕ್ಷಿತ ರಾಮ ।
ಸೀತಾದರ್ಶನಮೋದಿತ ರಾಮ ।

ಅಭಿಷಿಕ್ತವಿಭೀಷಣನುತ ರಾಮ ।
ಪುಷ್ಪಕಯಾನಾರೋಹಣ ರಾಮ ।
ಭರದ್ವಾಜಾದಿನಿಷೇವಣ ರಾಮ ।
ಭರತಪ್ರಾಣಪ್ರಿಯಕರ ರಾಮ ।

ಸಾಕೇತಪುರೀಭೂಷಣ ರಾಮ ।
ಸಕಲಸ್ವೀಯಸಮಾನಸ ರಾಮ ।
ರತ್ನಲಸತ್ಪೀಠಾಸ್ಥಿತ ರಾಮ ।
ಪಟ್ಟಾಭಿಷೇಕಾಲಂಕೃತ ರಾಮ ।

ಪಾರ್ಥಿವಕುಲಸಮ್ಮಾನಿತ ರಾಮ ।
ವಿಭೀಷಣಾರ್ಪಿತರಂಗಕ ರಾಮ ।
ಕೀಶಕುಲಾನುಗ್ರಹಕರ ರಾಮ ।
ಸಕಲಜೀವಸಂರಕ್ಷಕ ರಾಮ ।
ಸಮಸ್ತಲೋಕೋದ್ಧಾರಕ ರಾಮ ॥

ರಾಮ ರಾಮ ಜಯ ರಾಜಾ ರಾಮ ।
ರಾಮ ರಾಮ ಜಯ ಸೀತಾ ರಾಮ ॥


 
॥ ಉತ್ತರಕಾಂಡಃ ॥

ಆಗತ ಮುನಿಗಣ ಸಂಸ್ತುತ ರಾಮ ।
ವಿಶ್ರುತದಶಕಂಠೋದ್ಭವ ರಾಮ ।
ಸಿತಾಲಿಂಗನನಿರ್ವೃತ ರಾಮ ।
ನೀತಿಸುರಕ್ಷಿತಜನಪದ ರಾಮ ।

ವಿಪಿನತ್ಯಾಜಿತಜನಕಜ ರಾಮ ।
ಕಾರಿತಲವಣಾಸುರವಧ ರಾಮ ।
ಸ್ವರ್ಗತಚಮ್ಬುಕ ಸಂಸ್ತುತ ರಾಮ ।
ಸ್ವತನಯಕುಶಲವನನ್ದಿತ ರಾಮ ।

ಅಶ್ವಮೇಧಕ್ರತುದಿಕ್ಷಿತ ರಾಮ ।
ಕಾಲಾವೇದಿತಸುರಪದ ರಾಮ ।
ಆಯೋಧ್ಯಕಜನಮುಕ್ತಿತ ರಾಮ ।
ವಿಧಿಮುಖವಿಭುದಾನನ್ದಕ ರಾಮ ।

ತೇಜೋಮಯನಿಜರೂಪಕ ರಾಮ ।
ಸಂಸೃತಿಬನ್ಧವಿಮೋಚಕ ರಾಮ ।
ಧರ್ಮಸ್ಥಾಪನತತ್ಪರ ರಾಮ ।
ಭಕ್ತಿಪರಾಯಣಮುಕ್ತಿದ ರಾಮ ।

ಸರ್ವಚರಾಚರಪಾಲಕ ರಾಮ ।
ಸರ್ವಭವಾಮಯವಾರಕ ರಾಮ ।
ವೈಕುಂಠಾಲಯಸಂಸ್ತಿತ ರಾಮ ।
ನಿತ್ಯನನ್ದಪದಸ್ತಿತ ರಾಮ ॥

ರಾಮ ರಾಮ ಜಯ ರಾಜಾ ರಾಮ ।
ರಾಮ ರಾಮ ಜಯ ಸೀತಾ ರಾಮ ॥ 


-----------------*------------------*------------------*-----------------


Sunday, June 5, 2022

ಒದ್ದಾಟದ ಸಮಯ


ನೋಡುನೋಡುತ್ತಿದ್ದಂತೆಯೇ 

ಸಮಯ ಕಳೆದು ಹೋದಂತಿದೆ 

ಮನದಾಸೆಗಳಿದ್ದಂತೆಯೇ 

ಹೂತು ಮರೆಯಾದಂತೆನಿಸುತಿದೆ 


ಪೂರೈಸುವ ತವಕವಿದ್ದರೂ 

ಸಮಯದ ಅಂತರವಿದ್ದಂತಿದೆ. 

ಮುನ್ನಡೆಯುವ ಛಲವಿದ್ದರೂ 

ಅನುಗ್ರಹದ ಕೊರತೆಯಿದ್ದಂತಿದೆ 


ಬಲ್ಲೆ ನಾ ಇದು ಏನೆಂಬುದ 

ಆ ದೇವರ ಚೆಲ್ಲಾಟವೋ?

ಮುನ್ನುಗ್ಗುವ ಸಮಯದಾಟವೋ?

ಅಲ್ಲ ನನ್ನದೇ ಮನದೊದ್ದಾಟವೋ??

 

ಸಮಯವಿದ್ದರೂ ಸಮಯವಿರದಂತೆ 

ಮನಸ್ಸಿದ್ದರೂ ಮಾರ್ಗವೇ ಇರದಂತೆ 

ಛಲವಿದ್ದರೂ ಹಂಬಲವಿರದಂತೆ 

ಯಾವ ಕಾರ್ಯವೂ ಕೈಗೂಡದಂತೆ 

ಆಟವಾಡುತಿದೆ ನನ್ನೀ "ಸಮಯ"

Tuesday, May 24, 2022

*ಗುರುಸ್ಥಾನ*

 

https://media.newstrack.in/uploads/national-news//Aug/06/big_thumb/td_5f2b8ca7c8adc.jpg

ಗುರು ಎಂದರೆ ಯಾರು??? ಗುರು ಎಂದರೆ ಮಾರ್ಗದರ್ಶಕ. ಗುರು ಎಂದರೆ ಬೆಳವಣಿಗೆಯ ದಾರಿಯನ್ನು ತೋರುವವ. ಗುರು ಸ್ಥಾನದಲ್ಲಿರುವವನು ನಿಷ್ಕಲ್ಮಶ ಹೃದಯಿ ಆಗಿರಬೇಕು. ಯಾವುದೇ ಭೇದ ಭಾವ ಇಲ್ಲದೆ, ತನ್ನ ಸ್ಥಾನಕ್ಕೆ ನಿಜವಾದ ಅರ್ಥ ನೀಡುವಂಥವನಾಗಿರಬೇಕು. ಅದು ಬಿಟ್ಟು, ದ್ವೇಷ ಅಹಂಕಾರವನ್ನೊಳಗೊಂಡು  ಕಟು ಹೃದಯಿ ಆಗಿದ್ದರೆ, ಅವನು ಆ ಗುರು ಸ್ಥಾನಕ್ಕೆ ಸರಿಹೊಂದುವವನೇ ಅಲ್ಲ. ಅಂಥವನು ಯಾವುದೇ ರೀತಿಯ ಗೌರವಕ್ಕೆ ಅರ್ಹನಲ್ಲ. 

ಗುರುಸ್ಥಾನದಲ್ಲಿ "ನನ್ನದೇನಿದೆ" ಎಂಬುದಲ್ಲ, ಆದರೆ ನನ್ನಿಂದ ಎಷ್ಟು ಜನರಿಗೆ ಒಳಿತಾಗುತ್ತದೆ ಎಂಬುದನ್ನು ನೋಡುವಂಥವರಾಗಬೇಕು. ಮಹಾನುಭಾವರ ಲಕ್ಷಣ ಏನೆಂದರೆ ಕ್ಷಮಾಗುಣ. ಗುರುಸ್ಥಾನದಲ್ಲಿರುವವರು ಕ್ಷಮಾಗುಣವನ್ನು ಮೈಗೂಡಿಸಿಕೊಂಡಿರಬೇಕು. ಜ್ನಾನಾರ್ಥಿಗಳು ತಪ್ಪು ಮಾಡುವುದು ಸಹಜ. ಗುರುಸ್ಥಾನದಲ್ಲಿರುವವರು ಅದು ತಪ್ಪು ಎಂದು ತಿಳಿದಾಗ, ಅವರನ್ನು ತಿದ್ದುವುದು ಗುರುವಿನ ಮುಖ್ಯ ಕರ್ತವ್ಯ, ಆದರೆ, ಆ ತಪ್ಪನ್ನು ಅಪರಾಧವೆನ್ನುವಂತೆ ವರ್ಗೀಕರಿಸಿ, ದ್ವೇಷದ ಭಾವನೆ ಮನಸ್ಸಲ್ಲಿಟ್ಟುಕೊಂಡಾಗ ಅವನ ಗುರುಸ್ಥಾನ ಅಲ್ಲಿಗೆ ಕೊನೆಯಾಗುತ್ತದೆ. ಯಾವುದೇ ರೀತಿಯಲ್ಲಿ ಅವನು ಗುರು ಎಂಬ ಪದಕ್ಕೆ ಅರ್ಹನಾಗಿರುವುದಿಲ್ಲ.  ಅಧಮರು, ಪಕ್ಷಪಾತಿಗಳು, ಧನಪಿಶಾಚಿಗಳು ಗುರುಸ್ಥಾನವನ್ನು ಅಲಂಕರಿಸಲು ಯೋಗ್ಯರು ಅಲ್ಲವೇ ಅಲ್ಲ. "ಹರ ಮುನಿದರೆ ಗುರು ಕಾಯ್ವನು" ಎಂಬ ಉಕ್ತಿಯೇ ಇದೆ. ಹೀಗೆ, ಗುರು ಎಂದರೆ ಸಾಕಾರ ಸಿದ್ಧಿಯನ್ನು ಕೊಡುವಂತವನು, ಸಾಕಾರ ರೂಪವನ್ನು ಕೊಡುವಂತವನು. ವಿಷ್ಣು ಸ್ವರೂಪಿ ಅವನು. ಅಯೋಗ್ಯರನ್ನು ಗುರು ಎಂದು ಕರೆಯುವುದು ಅಸಾಧ್ಯದ ಮಾತು.

ಇಂದಿನ ಯುಗದಲ್ಲಿ, ಗುರು ಎಂಬ ಪದ ತುಂಬಾ ವ್ಯಾಪಾರಿಕವಾಗಿದೆ. ಕೇವಲ ದುಡ್ಡಿನ ಮುಖ ನೋಡಿ ಗುರುಸ್ಥಾನ ಸೃಷ್ಟಿಸಿಕೊಳ್ಳುವವರು ತುಂಬಾ ಜನ ಇದ್ದಾರೆ. ಯಾರೋ ಮಹಾತ್ಮರು ಮಾಡಿದ ಕೆಲಸಗಳನ್ನು ತಾವು ಮಾಡಿದವರೆಂಬಂತೆ ಬಿಂಬಿಸಿಕೊಂಡು ತಮ್ಮನ್ನು ತಾವೇ ದೇವರಿಗಿಂತಲೂ ಮಿಗಿಲಾದವರೆಂಬಂತೆ ಬಿಂಬಿಸಿಕೊಳ್ಳುತ್ತಾರೆ. ಗುರುಸ್ಥಾನದ ಮಹಿಮೆ ಯಾರು ತಿಳಿದುಕೊಂಡಿರುತ್ತಾರೋ, ಅವರು ಯಾವುದೇ ದ್ವೇಷದ ಭಾವನೆ ಹೊಂದಿಕೊಂಡಿರುವುದಿಲ್ಲ, ಬದಲಾಗಿ ಅಜ್ಞಾನವಿದ್ದಲ್ಲಿ ಜ್ಞಾನವನ್ನೂ, ಕತ್ತಲಿದ್ದಲ್ಲಿ ಬೆಳಕನ್ನೂ, ವಿಷವಿದ್ದಲ್ಲಿ ಅಮೃತವನ್ನೂ ಬೀರುವ ಪ್ರಯತ್ನ ಮಾಡುತ್ತಾರೆ. ತನ್ನ ಅನುಯಾಯಿಗಳ ಒಳಿತನ್ನು ಬಯಸುತ್ತಾರೆ. 

ಹೀಗೆ, ಗುರುಸ್ಥಾನದಲ್ಲಿರುವವನೂ ಕೂಡಾ ತನ್ನ ಸ್ಥಾನದ  ಮಹತ್ವವನ್ನು ಮೈಗೂಡಿಸಿಕೊಂಡವನಾಗಿರಬೇಕು. ಹಾಗೂ ಪ್ರತಿಯೊಬ್ಬರೂ ಕೂಡ ಗುರುಸ್ಥಾನದಲ್ಲಿ ಯಾರನ್ನಿಡುತ್ತಾರೋ, ಅವರು ಯೋಗ್ಯರಾಗಿದ್ದರೆ ಮಾತ್ರ ಆ ಸ್ಥಾನ ನೀಡಿ ಗೌರವಿಸಿ. ಯೋಗ್ಯರಿಗೆ ಗೌರವ ನೀಡಿದಷ್ಟು ಪುಣ್ಯ ನಿಮ್ಮದಾಗುತ್ತದೆ.