Sunday, May 10, 2015

ಮನದಾಳದ ಚಿಂತನ

ಈ ಜಗದಿ ನೀ ನೆಲೆ ಹೂಡಲು
ಇರುವುದು ಸಾವಿರ ಹಾದಿ
ನಿಷ್ಠೆಯಿಂ ನೈಪುಣ್ಯತೆ ಕೂಡಲು
ಗೆಲುವಿಗೆ ಅದೊಂದೇ ಬುನಾದಿ

ಜೀವನಕೆ ಆಧಾರ ನೀಡಲು
ಲಭ್ಯವು ಅಪರಿಮಿತ ನೌಕರಿ
ಪೆರ್ಬಯಕೆಯ ಛಾಯೆ ಕಾಡಲು
ಬಲಿಯಾದೇ ಜೋಕೆ ಶಿಕಾರಿ

ಉಳ್ಳದರಲ್ಲಿ ತೃಪ್ತಿಯಿರಲಿ
ಇಲ್ಲದುದರ ಬೆನ್ನಟ್ಟದಿರು
ಸಂತೃಪ್ತಿಯ ದೀಪ್ತಿಯಿರಲಿ
ನಮ್ರತೆಯ ಹಿಮ್ಮೆಟ್ಟದಿರು

ಮುಂದೆ ನಡೆದಂತೆ ನೀನಾದೀಯ 
ಹಲವರ ಮನದಿ ಬರಿದೆ ನೆನಪು
ತೋರು ಇಂದೇ ನಿನ್ನ ಉತ್ತಮತೆಯ
ಬೀರುವುದದೇ ನಿನ್ನ ವ್ಯಕ್ತಿತ್ವದ ಹೊಳಪು 

No comments:

Post a Comment