Saturday, November 14, 2015

ಜೀವನದ ಪಾಠ

ಪರಜಾತಿಯ ಕೀಟವಾದರೂ
ವಿಶ್ವಾ‌ಸಕೆ ಅರ್ಹವಾಗಿತ್ತು‌..
ಸ್ವಜಾತಿಯ ಹುಳವಾಗಿದ್ದರೂ
ನಂಬಿಕೆಗೆ ಅರ್ಥವಿರದಂತೆ ನಡೆಯಿತು...

ವಿಷವನ್ನು ವಿಷದ ಹೊರತು
ಫಲರಸದಿಂದ ತಡೆಯಲಾರದು...
ಮುಳ್ಳನ್ನು ಮುಳ್ಳ ಹೊರತು
ಪುಷ್ಪದ ಮೃದುತ್ವದಿಂದ ಕಳೆಯಲಾಗದು...

ಸಹನೆಗೆ ಬೆಲೆಯಿರದ ಈ ಜಗದಿ
ಸಹಿಷ್ಣುಗಳಿಗೆ ಜಗಹವಿಲ್ಲ...
ಮೃದು ಹೃದಯದ ಪಾಪಿಗಳಿಗೆ
ಆಶಯಗಳ ಆಗ್ರಹವಿಲ್ಲ...

ಪರರಿಗೆ ಕೇಡು ಬಯಸದಿದ್ದರೂ
ಸತ್ಕರ್ಮಿಗಿಲ್ಲ ಈ ಜಗದಿ ಬೆಲೆ...
ಕಠಿಣ ಕ್ಷಣಗಳಲಿ ಮೃದುವಾದರೆ
ನಿನ್ನ ಕೊನೆಯನೇ ನೀ ಆಮಂತ್ರಿಸಿದಂತೆ...

ಇದೇ ಜಗದ ನೀತಿ....