Wednesday, May 6, 2015

ಕೆಟ್ಟು ಹೋಗಿದೆ ಮನ

ಈ ಹೃದಯದ ನೋವ ಜ್ವಾಲೆಯನು
ಅರ್ಥೈಸದೆ ಊದುತಿಹರು ಬರಿದೆ ನೋವ ಕಹಳೆಯ
ಹರಿಸಿ ಅಪವಾದಗಳ ಸರಮಾಲೆಯನು
ಕೆಡಿಸಿಹರು ಮನದ ಸಂತೋಷದ ಕಳೆಯ...

ಕಲ್ಲೆರಚುತಿಹರು ನಿಜವಾದ ಪ್ರೀತಿಗೆ
ಅದ ತಿಳಿದಿದ್ದರೂ ಬಸವಲಿದೆ ಏನೂ ಮಾಡಲಾಗದೆ
ಆಪ್ತರ ಕ್ರೌರತಾಂಡವದ ಭೀತಿಗೆ
ಸೋತೆ, ನನ್ನ ಮನವನೇ ತಿವಿದು ನೋವ ಹೇರಿದೆ...

ಅನ್ಯಾಯ ಅಪವಾದಗಳ ರೌದ್ರತಾಂಡವಕೆ
ಭೀತಗೊಂಡು ಚಿವುಟಿ ಚಿತ್ರಾನ್ನವಾಗಿದೆ ಈ ಹೃದಯ
ಮನದ ಸಮತೋಲನ  ಕಳೆವುದಕೆ
ನಾಂದಿ ಹಾಕಿದೆ ಈ ಕೆಟ್ಟ ಘಳಿಗೆಯ ಉದಯ...

ಕಣ್ಣಂಚಿಗೆ ಬಂದಿದ್ದರೂ ಈ ಕಣ್ಣೀರು
ಕೆಳಗಿಳಿಯದೆ ಕರಗಿ ಹೋಗುವಂತಿದೆ ಹೃದಯದಲೆ
ಮನದಲಿ ನೋವಿನ ಕಹಳೆಯ ತೇರು
ಕಾಣದಂತಾಗಿದೆ ಎಲ್ಲಿಯೂ ಅಭಿಲಾಷೆಯ ಸ್ವಾತಂತ್ರ್ಯದ ನೆಲೆ...

No comments:

Post a Comment