Friday, May 1, 2015

ಬರಡು ದಿನಗಳು

ಮುಳುಗುತ್ತಿರುವ ಸೂರ್ಯ...
ನಿಶ್ಚಲವಾದ ಕಡಲು...
ಬಾಡಿ ಸ್ಥಿರವಾಗಿ ನಿಂತಿರುವ ಮರಗಳು...
ಹೆಪ್ಪು ಮೊರೆ ಹಾಕಿ ಸಪ್ಪೆಯಾಗಿ ನಿಂತಿರುವ ಹೂಗಳು...

ಮನಸ್ಸಿರದೆ ಮೋಡದ ಮರೆಯಲ್ಲಿ ಅವಿತಿರುವ ಚಂದಿರ...
ಕಾಣುವಂತಿದ್ದರೂ ಕಾಣದೆ ಮಿಚುತಿರುವ ನಕ್ಷತ್ರಗಳು...
ಕಣ್ಣೀರ ಧಾರೆಯಂತೆ ಇಳಿಯುತ್ತಿವೆ ಮಳೆಹನಿಗಳು...
ಅಳುವ ಮಾರ್ದನಿಯಂತೆ ಕೇಳುವ ಹಕ್ಕಿಗಳಿಂಚರಗಳು....

ಮನದಲಿ ಹೊಗೆಯಾಡುತಿವೆ ಉರಿಯುವ ಬೆಂಕಿಯುಂಡೆಗಳು...
ಒಡೆದು ಚೂರಾಗಿವೆ ಮನದ ನೂರೆಂಟು ಕನಸುಗಳು...
ಕಣ್ಣೀರ ಹೊಳೆಯಲಿ ಮುಳುಗಿ ಹೋಗಿವೆ ಈ ನಯನಗಳು...
ದುಃಖದ ಸಾಗರದಲಿ ಕರಗಿ ಹೋಗಿವೆ ಮಾತುಗಳು...

ಮುಂದೋಡದೆ ಸ್ಥಿರವಾಗಿ ನಿಂತಿದೆ ಮನದ ಚಿಂತನೆಗಳು...
ಮೂಡಿದೆ ಹೊಸದಾಗಿ ಈ ಮನದಲಿ ಕಾಡುವ ಚಿಂತೆಗಳು...
ಹೀಗೇ ಕೊನೆಯಾಗಬಾರದೇಕೆ ಒಮ್ಮೆ ಈ ಜೀವನ ಕ್ಷಣಗಳು...
ತವಕಿಸುತಿದೆ ಮನವು ನಿಶ್ಚಿಂತೆಯ ಕಡಲಲಿ ಚಿರವಾಗಿ ಮಲಗಲು...

(೧೧--೦೩-೨೦೧೪)

No comments:

Post a Comment