Friday, May 15, 2015

ಆಶಯ

ಯಾಕಾಗಿ ಈ ನೋವು ಕಾಡುತಿದೆ ಮನವನು?
ಹಿಂಡಿ  ಕಾವೇರಿಸುತಿದೆ ನನ್ನ ರಕ್ತ ಕಣಕಣವನು
ಮರೆತರೂ ಮರೆಯಲಾಗದೆ ಸುರಿಸುತಿದೆ ಕಣ್ಣೀರನು
ದುಃಖದ ಕೊಳಲನಾದವು ತಲುಪುತಿದೆ ಮನದಾಳವನು.

ಕ್ರೋಧದ ಅಗ್ನಿಜ್ವಾಲೆಯು ಜಲಿಸುತಿದೆ ಈ ಎದೆಯನು
ಕಣ್ಣೀರ ನೆನಪುಗಳು ತಿವಿದು ಬರಡಾಗಿಸಿದೆ ಕನಸ ಕಂಗಳನು
ನಿರಾಸೆಯ ಅಟ್ಟಹಾಸಗಳು ಮೌನಗೊಳಿಸಿದೆ ಮನದಾಸೆಯನು
ನೋವ ಛಡಿಯೇಟುಗಳು ತುಳಿದು ಕೊಂದಿದೆ ಬಯಕೆಯನು


ಹೆಣಗುತಿದೆ ಹೃದಯವಿದು ಕಾಣಲು ನಂಬಿಕೆಯ ಜ್ಯೋತಿಯನು
ಉತ್ಸಾಹದ ಛಾಯೆ ಹರಡುತಿದೆ ನೋಡಲು ಸುದಿನಗಳನು
ಸತ್ಯವ ಅರಗಿಸಲಾರದೆ ಚಡಪಡಿಸುತಿದೆ ಸಹಿಸುತ ಅನ್ಯಾಯವನು
ಎದುರಿಸಲಾರದೆ ಸೋತಿದೆ ಈ ಮನ ದುರ್ಜನರಟ್ಟಹಾಸವನು

ಬರಲಿ ಹುರುಪ ಪನ್ನೀರು ಆವಿಗೊಳಿಸಲಿ ದುಃಖಗಳೆಲ್ಲವನು
ಹರಡಲಿ ನೆಮ್ಮದಿಯ ಸುಗಂಧ ಕೊಳ್ಳಲಿ ನಿರಾಸೆಗಳ ಗಾಳಿಯನು
ಜಯದ ಮಳೆಯದು ಬೀರಲಿ ಆರಿಸಲಿ ಭಯದ ಬೆಂಕಿಯನು
ಖುಷಿಯ ಜೇನದು ದೊರೆತು ಸವಿಗೊಳಿಸಲಿ ನೋವ ಉರಿಯನು...

No comments:

Post a Comment