Sunday, February 23, 2014

ನಗೆ

ಬಾಳೆಂಬ ನೀರಿನಲ್ಲಿ
ಅರಳಿತು... ನಗುವೆಂಬ ಕೆಂದಾವರೆ .

ರಸಿಕರಿಗಂತೂ ನೀಡಿತು
ಮಹದೋಲ್ಲಾಸವ .
ದುಃಖವನ್ನು ಮರೆಸುವ
ಹರಿದ್ವಾರವ ತೆರೆಯಿತು.

ಹಲವರಲ್ಲಿ ಮೂಡಿತು
ಮಾತ್ಸರ್ಯವು
ತಮಗಿಲ್ಲದ್ದು ಅವರಲ್ಲಿದೆ
ಎಂಬ ಬೇಸರವು.
ಉರಿಯಾಗಿ ಸುಟ್ಟಿತು
ಅವರ ಮನವ
ವಿಷವಾಗಿ ಬೆಳೆಯಿತು
ಅವರಲ್ಲಿ ರೋಶವು.

ಮತ್ತಿತರರ ಮನವನ್ನು
ತಣಿಸಿತು
ಅವರ ದುಃಖವ ಕಳೆದು
ಆನಂದಾತಿರೇಕವ
ಮೂಡಿಸಿತು.
ಇತರರ ನಗೆಯಿಂ
ಹಲವರ ಮನವು
ನಕ್ಕು ನಲಿದಾಡಿತು. 

No comments:

Post a Comment