Monday, February 10, 2014

ಜೀವನ ವಸಂತಗಾನ...

ಏಕೆ ಬಾಡುತಿದೆ ಮನ
ಹೃದಯದಿ ಕಣ್ಣೀರ ಕಂಪನ
ಎನಿತು ತಾಳೆನೋ ನಾ ಕಾಣೆ
ಈ ಜೀವನದ ಲಘುಪಯಣ...

ಕೊರೆಯುತಿದೆ ಚಳಿಗೆ ಈ ಜೀವನ
ಕಾಯುತಿದೆ ವಸಂತನಾಗಮನ
ಬಿಸಿಲ ಬೇಗೆಗೆ ಬೇಯುತಿದೆ ಮನ
ತಂಪೆರೆಯಲು ಬಾ "ವರ್ಷಾ" ಈ ದಿನ...

ಕಾಲ ಕೂಡಿಬರದೆ ಎಂದೂ ನಡೆಯದು
ನಾವು ಮನದಲಿ ಅಂದುಕೊಂಡದ್ದು..
"ಕಾಲಾಯ ತಸ್ಮೈ ನಮಃ" ಎಂದು
ಶರಣಾಗಬೇಕು ಭಗವಂತನಿಗೆ ಎಂದೂ...

ಬಾಡದಿರಲಿ ಎಂದಿಗೂ ಈ ಮನ
ಈಡೇರಲಿ ಎನ್ನ ಬಯಕೆಗಳ ಕಲ್ಪನ
ತಂಪೆರೆಯಲಿ ಯಶೋಲ್ಲಾಸದ ಆಗಮನ
ಸಂತಸದ ಗುಡಿಯಾಗಲಿ ಈ ಜೀವನ...

No comments:

Post a Comment