Sunday, February 23, 2014

ಜೀವನ ಈ ದಿನ

ಏನು ಜೀವನ ಎಂಥಾ ಸಂಭ್ರಮ
ಜೀವನದ ಭಾವ ನೂತನ.
ಗೆಲುವು ಅನುದಿನ ಸೋಲು ಈ ದಿನ
ಮನಕೆ ಹಿಂಸೆಯ ಔತಣ.

ವೀಣೆಯಲಿ ಅಪಸ್ವರದ ಸಿಂಚನ
ಗಾಳಿಯಲಿ ವಿಷದ ಸಂಗಮ
ಅಗ್ನಿಯೊಳು ಮೃದು ಹೂವು ಬೇಯುತ
ನರಳು ನರಳುತ ಅರ್ಪಣ.

ಹಕ್ಕಿಗಳ ಇಂಚರದಿ ಕಳವಳ
ಹರಿದಾಡೋ ನದಿಯದು ಅಚರ
ವಜ್ರ ವೈಡೂರ್ಯ ತುಂಬಿದ ಮನೆಯೊಳ
ಭಾಗದಿ ಸೇರಿಕೊಂಡಿದೆ ನಾಗರ.

ಏನು ಜೀವನ ಎಂಥಾ ಸಂಭ್ರಮ
ಸೋಲು ಗೆಲುವಿನ ಮಿಶ್ರಣ
ಮನದಿ ಕೊರಗದೆ ನಗುತ ಬಾಳಲು
ಸಂತಸವೇ ನಮಗನುದಿನ...

No comments:

Post a Comment