Friday, February 14, 2014

ಶರೀರದ ನೀತಿ

ಸತ್ತ ಮೇಲೆ ಆಗುವುದು ನಶ್ವರ
ಹೊಳೆಯುತ್ತಿರುವ ಈ ಶರೀರ
ಅದಕ್ಯಾಕೆ ಬೇಕೀಗ ಶೃಂಗಾರ?
ಪಡಲು ಹೆರವರು ಮತ್ಸರ...

ಸತ್ಯ ಅಹಿಂಸೆಯೆ ಆಹಾರ
ನ್ಯಾಯ ನೀತಿಯೆ ವ್ಯವಹಾರ
ವಿದ್ಯಾದಾನವೇ ಸದ್ವಿಚಾರ
ಷಡ್ವೈರಿಗಳೇ ಅನಾಚಾರ...

ಸ್ನೇಹವೇ ನಮಗೆ ವೈಭೋಗ
ಸಹಾಯದಲ್ಲಿದೆ ಅನುರಾಗ
ಹಿಂಸೆಯೊಂದೇ ಮಹಾರೋಗ
ಹರಿಸ್ಮರಣೆಯೇ ನಮಗೆ ನಗ...

ಬಿಟ್ಟುಬಿಡಿ ನಿಮ್ಮಯ ಸ್ವಾರ್ಥ
ಜೀವನಕೆ ಕೊಡಿ ಹೂಸ ಅರ್ಥ...
ಯಾರೂಂದಿಗೂ ಮಾಡದಿರಿ ಅನರ್ಥ
ಅದುವೇ ಜೀವನದ ನಿಜ ಅರ್ಥ...

No comments:

Post a Comment