Sunday, February 16, 2014

ಸಾಕು ಮಾಡಿ ಜಗಳ

ಜನರ ಸ್ವಾರ್ಥದಿಂದ ಬಳಲಿ
ನಿದ್ದೆ ಮಾಡುತ್ತಿರುವಳು ಭಾರತಾಂಬೆ
ವಿಶ್ವವಿಡೀ ಶಾಂತಿ ತುಂಬಿಕೊಳಲಿ
ಎಂದು ಬೇಸತ್ತು ಬೇಡಿಕೊಂಬೆ

ಪ್ರಪಂಚದಾದ್ಯಂತ ಉಪಯುಕ್ತವಾದ ನೀರು
ಅದನು ಪಡೆಯಲೇಕೆ  ಕಣ್ಣೀರು?
ನೀರು ಕುಡಿಯಲು ಹೊರಾಡುವವರಾರು?
ಅವರೆಡೆಗೆ ದಾರುಣ ನೋಟ ಬೀರು...

ಅಣ್ಣಾ ... ಏಕೆ ನೀರಿಗಾಗಿ ಪರಸ್ಪರ ಜಗಳ
ಅದರಿಂದ ನೋಯುವುದು ಸಾವಿರಾರು ಹೃದಯ
ಅದರ ಬದಲಿಗೆ ಪ್ರೀತಿಸು ಪ್ರತಿ ಜನಗಳ
ಜಗಳಗಳಿಗೆ- ದ್ವೇಷಕ್ಕೆ ಹೇಳು ವಿದಾಯ...

No comments:

Post a Comment