Sunday, February 23, 2014

ಅನುಗ್ರಹ ಬೇಕೇ?

ನಮ್ಮಲ್ಲಿದ್ದರೂ ಜ್ಞಾನ , ಪ್ರಾಣ , ಧ್ಯಾನಗಳೆಲ್ಲ
ಅನುಭವಿಸಬೇಕೆಂದರೆ ಅನುಗ್ರಹವೇ ಬೇಕಲ್ಲ?!!!

ಗುರುಹಿರಿಯರ ಅನುಗ್ರಹವಿಲ್ಲದಿರೆ...
ಪಡೆದ ವಿದ್ಯೆಗೂ ಬೆಲೆಯಿಲ್ಲ
ಧನ ಧಾನ್ಯ ಸಂಪತ್ತಿಗೂ ಬೆಲೆಯಿಲ್ಲ
ಅಷ್ಟೇ ಏಕೆ, ಅಧಿಕಾರದ ದರ್ಪಕ್ಕೋ ಬೆಲೆಯಿಲ್ಲ ... 

ಹೆತ್ತವರ ಅನುಗ್ರಹವಿಲ್ಲದಿರೆ...
ಸಮಾಜದಿ ಸ್ಥಾನ ಪಡೆದರೂ
ಆ ಸ್ಥಾನದಿ ಗೌರವ ಪಡೆಯಲು ಸಾಧ್ಯವಿಲ್ಲ
ಸಮಾಜದ ಕಣ್ಣಿನಲ್ಲಿ ನಿನಗೆ ಬೆಲೆಯಿಲ್ಲ...

ದೇವರ ಅನುಗ್ರಹವಿಲ್ಲದಿರೆ...
ಆತ್ಮನ ಸಂತೋಷ ಸಾಧ್ಯವಿಲ್ಲ
ಆಧ್ಯಾತ್ಮಿಕ ಲೋಕದಲ್ಲಿ ಬೆಲೆಯಿಲ್ಲ
ದೈವಾತ್ಮವಾಗುವುದಂತೂ ಸಾಧ್ಯವೇ ಇಲ್ಲ...

 ಅನುಗ್ರಹವೇ ಅತಿ ಮುಖ್ಯ
ಇಹಲೋಕದ ಆನಂದ, ಆಧ್ಯಾತ್ಮಿಕ ಆನಂದ
ಪ್ರತಿಯೊಂದೂ  ಸಾಧ್ಯ ಅನುಗ್ರಹದಿಂದ
ಅನುಗ್ರಹವೇ ಅತಿ ಮುಖ್ಯ...

No comments:

Post a Comment