Friday, January 3, 2014

ದುಃಖಿತ ಮನಸ್ಸಿನ ಹಾದಿ

ಬೆಣ್ಣೆಯಂಥ ಮೃದುವಾದ ಮನಸು
ಸಿಡಿದು ಕಲ್ಲಾಗಿ ಹೋಯಿತೇ?
ಮನದಲ್ಲಿ ಅರಳಿದ ಕನಸು
ಒಡೆದು ಚೂರಾಗಿ ಹೋಯಿತೇ?

ಛೀಕಾರ ನಕಾರಗಳಿಗೆ ಕದಡಿ
ಬಾಡಿ ಬರಡಾಗಿ ಹೋಯಿತೇ?
ದುಃಖದ ತಾಪದಲಿ ಬೆಂದು
ವೈರಾಗ್ಯದತ್ತ ತೆರಳಿತೇ?

ಸ್ವಾರ್ಥದ ಅಟ್ಟಹಾಸಗಳಿಗೆ ಸೋತು
ಖಿನ್ನತೆಯ ಅಪ್ಪಿಕೊಂಡಿತೇ?
ಸಂಶಯಗಳ ಕೊಂಡಿ ಬಿಡಿಸಲಾರದೆ
ಸಾವೇ ದಾರಿಯೇನೋ ಎಂದಿತೇ?

ಸ್ಪಂದಿಸುವ ಆಧಾರಸ್ಥಂಭವಿಲ್ಲದೆ
ಮುನ್ನಡೆಯಲಸಾಧ್ಯವಾಯಿತೇ?
ಸ್ವಾಭಿಮಾನಕೆ ಜ್ವಾಲೆಯ ಉರಿ ತಾಗಿ
ಸಾವಿಗೆ ಶರಣಾಗಿ ಹೋಯಿತೇ?

No comments:

Post a Comment