Friday, January 17, 2014

ಸದ್ಚಿಂತನೆ

ಹೇ ಮುಗ್ಧ ಮನಸೇ..
ನೀನೆಂದೂ ಬಾಡದಿರು.
ನಿನ್ನ ಭಾವನೆಗಳ ಗುಡಿಯನು
ಕೆಡಹಲು ನೀ ಬಿಡದಿರು...

ನೀ ತಾಳಿದ ತಾಳ್ಮೆಯನು
ಯಾರೂ ಅರಿಯಲಾರರು.
ನಿಂದನೆಯ ಕಹಿನುಡಿಗಳನು
ಪಸರಿಸಲು ನೀ ಬಿಡದಿರು...

ಪ್ರೀತಿಯ ಬೆಳದಿಂಗಳನು
ವಿಷದಂತೆ ಕಾಣದಿರು.
ನೋವಿರದ ಭಾವವನು
ಸಾವಿಗೆಡಹಲು ನೀ ಬಿಡದಿರು...

ಜೀವನದ ಸೌಂದರ್ಯವನು
ಆನಂದದಿ ಸವಿಯುತಿರು.
ಸಿಹಿಕ್ಷಣಗಳು ಮೆರೆವುದನು
ಮನಸಾರೆ ನೀ ಬೇಡುತಿರು...

No comments:

Post a Comment