Wednesday, January 29, 2014

ದುಂಬಿಯ ಹಾಡು ಕೇಳಿ..


Composed on 21.07.2001

ಆಹಾ!! ಎಂತಹ ಸುಂದರ ಲೋಕ
ಶ್ರೀಗಂಧದ ನಾಡು ಕರ್ನಾಟಕ.

ಕೆಂದರಿಳ ಹಸಿರು ಬೀಡು
ಎಲ್ಲೆಲ್ಲೂ ಹಕ್ಕಿಗಳ ಹಾಡು
ಶುಭ್ರ ಜಲಪಾತಗಳ ನೋಡು
ಹೇ ಮಾನವಾ..ಮಾಡಬೇಡ ಅದಕೆ ಕೇಡು.

ಸುಗ್ಗಿಕಾಲದ ಹಚ್ಚ ಹಸಿರು
ತಂದಿತು ಈ ನಾಡಿಗೆ ಬಸಿರು
ಎಲ್ಲೆಡೆ ಪಸರಿತು ಶ್ರೀಗಂಧದ ಪನ್ನೀರು
ಹೇ ಮಾನವಾ..  ಎರಚಬೇಡ ಇಲ್ಲಿ ಕೆಸರು.

ಇಲ್ಲಿದೆ ಧಾರ್ಮಿಕ ವೈವಿಧ್ಯತೆ
ಆದರೂ ಈ ವೈವಿಧ್ಯತೆಯಲ್ಲಿದೆ ಐಕ್ಯತೆ
ಕನ್ನಡಿಗರಲ್ಲಿದೆ ಮಾನವೀಯತೆ
ಹೇ ಮಾನವಾ..ಕನ್ನಡದ ಬಗ್ಗೆ ಇರಲಿ ತಾತ್ಪರ್ಯತೆ.

ಬಂತು ವೈಜ್ಞಾನಿಕ ಯುಗ
ತಂದಿತು ನಾಡಿಗೆ ಐಶ್ವರ್ಯದ ಭೋಗ
ಅದನ್ನು ಪಡೆಯಲಿದೆ ನಮಗೆ ಯೋಗ
ಹೇ ಮಾನವಾ.. ಪಸರಿಸಬೇಡ ಇಲ್ಲಿ ವಿವಿಧ ರೋಗ.

No comments:

Post a Comment