ಮಂಗಳವಾರ, ಜನವರಿ 28, 2014

ದುಃಖಿತ ಮನಸಿನ ದಯನೀಯ ಬೇಡಿಕೆ

ನಾನೇನು ಮಾಡಿದೆನೆಂದು
ಒರಟಾಗಿ ವರ್ತಿಸುವರು?
ಪ್ರೀತಿಗೆ ಶರಣಾದೆನೆಂದು
ಛೀಕಾರ ಹಾಕುವರು...

ಜೀವನವೇ ಸಾಕೆಂದು
ಮನವಿಂದು ಕದಡಿಹುದು
ಭಾವನೆಗೆ ಬೆಲೆಯೆಂದೂ
ಸಿಗದೆಂದು ಅನಿಸಿಹುದು...

ಹೆತ್ತವರ ಪ್ರೀತಿಗೆಂದೂ
ಚೂರಿಯ ಇರಿಯಲಿಲ್ಲ
ನನ್ನ ಮನದ ಪ್ರೀತಿಗೂ
ನಕಾರ ಹಾಕಲಿಲ್ಲ...

ಗೊಂದಲದ ಸಮಯದಿಂದ
ಚೂರಾಗಿರುವೆನು ನಾನು
ನನ್ನ ಮನವ ಅರ್ಥೈಸಿ
ಸಂತಸದ ದಿನವ ನೀಡಿರಿನ್ನು...

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ