✍🏻*ದೀಪಲಕ್ಷ್ಮಿ ಭಟ್*, ಮಂಗಳೂರು
ತುಂಬಾ ವರ್ಷಗಳ ಮೇಲಾಯ್ತು ನಾನು ಇಲ್ಲಿಗೆ ಬಂದು. ಇದು ನನ್ನ ಊರು. ನಾನು ಹುಟ್ಟಿ ಬೆಳೆದ ನನ್ನ ಸವಣೂರು. ನಾವು ಊರು ಬಿಟ್ಟು ಬೆಂಗಳೂರಿಗೆ ಹೋಗಿ ಹಲವಾರು ವರ್ಷಗಳೇ ಕಳೆದಿವೆ. ನಮ್ಮ ಊರಿನಲ್ಲಿ ಓದು ಬರಹಕ್ಕೆ ಪ್ರಾಶಸ್ತ್ಯ ಕಮ್ಮಿ. ಹಾಗಾಗಿ ನಾನು ಮೇಲ್ದರ್ಜೆಯ ಕಲಿಕೆಗಾಗಿ ಬೆಂಗಳೂರಿಗೆ ಬಂದವ, ಓದು ಮುಗಿಸಿ ಅಲ್ಲೇ ಕೆಲಸ ಗಿಟ್ಟಿಸಿಕೊಂಡು, ಹಾಯಾಗಿ ಅಲ್ಲೇ ಸಂಸಾರ ಹೂಡಿದೆ. ನನಗೋ, ಊರಿನಲ್ಲಿ ಹಿಂದೆ ಮುಂದೆ ಯಾರೂ ಇಲ್ಲದ ಕಾರಣ, ಊರಿಗೆ ಬರುವ ಗೋಜೇ ಇರಲಿಲ್ಲ. ಹಳೆಯ ಕಾಲದ ಬೀದಿ ದಾರಿಗಳಲ್ಲಿ ನನ್ನ ಹೆಜ್ಜೆಗಳು ಹೊಸದಾಗಿ ಅಟ್ಟಿಹಾಕಿದ ಧೂಳಿನ ಮೇಲೆ ಹೆಜ್ಜೆ ಗುರುತು ಬಿಟ್ಟವು. ನನ್ನ ಬಾಲ್ಯದ ನೆನಪುಗಳು ಪ್ರತಿಯೊಂದು ಕೂಡ ಈ ಬೀದಿಗಳಲ್ಲಿ ಇನ್ನೂ ಜೀವಂತವಾಗಿಯೇ ಇವೆ.
ನನ್ನ ಹೆಸರು ರಾಜ. ನಾನು ಪದವಿ ಗಳಿಸಲೆಂದು ಬೆಂಗಳೂರಿಗೆ ಹೋದವ. ಅಲ್ಲೇ ಒಳ್ಳೆಯ ಕಂಪೆನಿಲಿ ಕೆಲಸ ಸಿಕ್ಕಿ ಅಲ್ಲೇ ಜೀವನದ ಬೇರೂರಿದ್ದರೂ, ನನ್ನ ಬಾಲ್ಯದ ನೆನಪುಗಳು ನನ್ನನ್ನು ಸದಾ ಸೆಳೆಯುತ್ತಿದ್ದವು. ಈ ಸಲ, ನಾನು ಊರಿಗೆ ಬಂದದ್ದು ಕೇವಲ ನೆನಪುಗಳಿಗಾಗಿ ಅಲ್ಲ, ಒಂದು ತೀವ್ರ ಆಕರ್ಷಣೆ, ಒಂದು ರಹಸ್ಯ ಪರಿಹರಿಸುವ ಸಂಕಲ್ಪ. ನನ್ನ ಕಾಲುಗಳು ಸವಣೂರಿನ ಹಳೆಯ ದಾರಿಗಳ ಮೇಲೆ ಸಾಗಿದಂತೆ, ನಾನು ನನ್ನ ಬಾಲ್ಯದ ನೆನಪುಗಳನ್ನು ಹಚ್ಚಿಹಾಕುತ್ತಿದ್ದೆ. ನಾನು ಎಲ್ಲಿದ್ದರೂ ನನ್ನ ಮನಸ್ಸು ಹಳೆಯ ದಾರಿಗಳತ್ತ, ದೊಡ್ಡ ಹುಣಸೆ ಮರದ ಕಡೆಗೆ, ನನ್ನ ಬಾಲ್ಯದ ನೆಲೆಮೂಡಿದ ಜಾಗಕ್ಕೆ ಹಿಂತಿರುಗುತ್ತಿತ್ತು.
ಆ ಮಂಗಳವಾರದ ಸಂಜೆ,ದೊಡ್ಡ ಹುಣಸೆ ಮರದ ಬಳಿ ನಾನು ನಿಂತಿದ್ದೆ. ಅದು ಕೇವಲ ಮರವಲ್ಲ; ನಮ್ಮ ಊರಿನ ಇತಿಹಾಸವನ್ನು ಹಂಚುವ ಜೀವಂತ ಸಾಕ್ಷಿ. ನಾನು ಹುಣಸೆ ಮರದ ಕೆಳಗೆ ನಿಂತು ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಿದ್ದಾಗ, “ಇಲ್ಲಿ ಬಂದು ಏನನ್ನು ಹುಡುಕುತ್ತಿದ್ದೀನೋ?” ಎಂದು ನನ್ನನ್ನು ನಾನೇ ಪ್ರಶ್ನೆ ಕೇಳಿಕೊಂಡೆ. ನನ್ನ ಅಂತರಾಳದಲ್ಲಿ ಅರಳಿದ ಈ ಪ್ರಶ್ನೆಗೆ ಉತ್ತರವಿರಲಿಲ್ಲ. ಅಷ್ಟರಲ್ಲೇ, ಹೇಮಂತನ ಹೆಜ್ಜೆಗಳ ಧ್ವನಿ ಕೇಳಿಸಿತು. ಹೇಮಂತ ನನ್ನ ಬಾಲ್ಯದ ಗೆಳೆಯ. ನನ್ನ ಹಳೆಮನೆಯ ನೆರೆಮನೆಯ ರೈತ ಶಿವಣ್ಣನ ಮಗ. ಅವನು ನನ್ನನ್ನು ನೋಡಿ ಕ್ಷಣಕಾಲ ನಿಂತು, “ರಾಜ, ನೀನು ಊರಿಗೆ ಹಿಂದಿರುಗಿದ್ದೀಯ ಅಂತ ನನಗೆ ಗೊತ್ತಾಗಿತ್ತು. ಆದರೆ ನೀನು ಈ ಮರದ ಬಳಿ ನಿಂತಿದ್ದೀಯ ಅನ್ನೋದು ಅಷ್ಟೇ ಕಾಕತಾಳೀಯ!” ಎಂದು ನಗುತ್ತಲೇ ಹೇಳಿದ.
ನಾನು ಹುಣಸೆ ಮರದ ತಳದಲ್ಲಿ ಕುಳಿತುಕೊಂಡು ಬಾಲ್ಯದ ನೆನಪುಗಳನ್ನು ಮೆಲುಕು ಹಾಕುತ್ತಿದ್ದೆ. “ಈ ಮರದಲ್ಲಿ ಅದೆಷ್ಟೋ ದಿನ ನಾವು ಆಟವಾಡಿದ್ದು, ನಮ್ಮ ಬೇಸರ ಎಲ್ಲವೂ ಅಡಗಿ ಹೋಗಿ ಬದುಕು ಸುಂದರವಾಗಿ ಕಾಣಿಸುತ್ತಿತ್ತು. ಆದರೆ ಈಗ, ಹೇಮಂತ, ನೀನು ಹೇಳೋದು ಏನು? ಊರಿನಲ್ಲಿ ವಿಚಿತ್ರ ನಡೆಯುತ್ತಿದೆಯಾ? ಏನದು ಸ್ವಲ್ಪ ಬಿಡಿಸಿ ಹೇಳು.” ಎಂದು ಕೇಳಿದೆ.
ಹೇಮಂತ ತಕ್ಷಣ ಗಂಭೀರನಾದ. “ ನಮ್ಮ ಊರಿನ ಜಮೀನುಗಳ ದೊಡ್ಡ ಭಾಗ ಈಗ ಕಳ್ಳರ ಗುಂಪು ಮತ್ತು ರಾಜಕಾರಣಿಗಳ ಹಾವಳಿಗೆ ಸಿಲುಕಿದೆ. ಅಲ್ಲಿ ನಾನಾ ರೀತಿಯ ಗೋಪ್ಯ ಕ್ರಿಯೆಗಳು ನಡೆಯುತ್ತಿವೆ. ಇತ್ತೀಚಿಗೆ, ಗೋವುಗಳನ್ನು ಭಕ್ಷಿಸುವ ಜನರೂ ಹುಟ್ಟಿಕೊಂಡಿದ್ದಾರೆ. ಊರಿನ ಜನರು ಭಯದಿಂದ ದಿಕ್ಕು ತೋಚದೆ ಬದುಕುತ್ತಿದ್ದಾರೆ. ನಾವು ಏನು ಮಾಡಬೇಕು ಎಂಬುದು ಯಾರಿಗೂ ಗೊತ್ತಿಲ್ಲ. ಹಾಗೇ, ಈ ಮರದ ಪಕ್ಕದಲ್ಲಿದ್ದ ಗುಹೆಯ ಒಳಗೆ ನಾವು ಕೆಲವರು ಹೀಗೆ ಒಂದು ರಜೆಯ ಸಂಜೆ ಹೋಗಿದ್ದೆವು. ಆದರೆ ಈ ಬಗ್ಗೆ ಹೇಳಲು ಯಾರಿಗೂ ಧೈರ್ಯವಿಲ್ಲ. ಆ ಗುಹೆಯ ಒಳಗಿನ ಪಠ್ಯಗಳು, ಶಿಲ್ಪಗಳು, ಮತ್ತು ಬೆಳಕಿಲ್ಲದ ಒಂದು ಪ್ರಪಂಚ, ಅವುಗಳಿಗೆ ಅರ್ಥ ಕಲ್ಪಿಸಲು ನಮಗೆಲ್ಲ ಸಾಧ್ಯವೇ ಇಲ್ಲ,” ಎಂದು ಹೇಳಿದ. ಹೇಮಂತನ ಮಾತು ಕೇಳಿ, ನನ್ನ ಕುತೂಹಲ ತೀವ್ರವಾಯಿತು. ನಾವು ಆ ದಿನವೇ ಆ ಗುಹೆಯತ್ತ ಹೋಗುವ ತೀರ್ಮಾನ ಕೈಗೊಂಡೆವು. ದೊಡ್ಡ ಹುಣಸೆ ಮರದಿಂದ ಸ್ವಲ್ಪ ದೂರದಲ್ಲಿದ್ದ ಆ ಗುಹೆಯ ಸುತ್ತಮುತ್ತ ಗಾಢವಾದ ಶಾಂತತೆಯಿತ್ತು. ಅದರೊಳಗೆ ಪ್ರವೇಶಿಸುವಾಗ, ನನ್ನ ಮೊದಲ ಅನುಭವ ಬಹಳ ವಿಚಿತ್ರ. ತಂಪಾದ ಗಾಳಿ ನಮ್ಮ ಮೇಲೆ ಬೀಸುತ್ತಿದ್ದಂತೆ, ತುಂಬಾ ಹಳೆಯ ಕಾಲದ ವಾತಾವರಣದಂತೆ ಭಾಸವಾಯಿತು. ತಳದಲ್ಲಿ ಕಾಣಿಸಿಕೊಂಡ ಬ್ರಹ್ಮ ಲಿಪಿ ನನ್ನನ್ನು ನಿಖರವಾಗಿ ಸೆಳೆದಿತ್ತು. ಹೇಮಂತ, ಈ ಲಿಪಿಯನ್ನು ಓದುತ್ತಿದ್ದಂತೆ, ಪಠ್ಯವು ಬರೆದಿದ್ದ ಮಾತು ನನ್ನ ಬದುಕಿನ ದಿಕ್ಕು ತೋರಿಸಿತು:
"ನೀನು ನಿನ್ನ ಮನಸ್ಸಿನ ಶ್ರದ್ಧೆಯಿಂದ ನಿನ್ನ ಗತಿಯನ್ನು ಅರಿಯಬೇಕು. ಅನ್ಯಾಯವನ್ನು ಸೋಲಿಸಲು ದಾರಿ ಇದು."
ಆ ಶಿಲಾ ಲಿಪಿ ನಮ್ಮ ಮನಸ್ಸಿಗೆ ಗೊಂದಲ ಉಂಟುಮಾಡಿದರೂ, ನನಗೆ ಕೆಲವು ವಿಷಯಗಳು ಇನ್ನೂ ಅರ್ಥವಾಗಬೇಕಿತ್ತು. ಅಲ್ಲಿನ ವಾತಾವರಣಕ್ಕೂ ನಮ್ಮ ಅಂತರಾಳಕ್ಕೂ ಒಂದು ವಿಚಿತ್ರ ಸಂಬಂಧವಿರಬೇಕು ಎನಿಸಿತು. ಮುಂದೆ ಹೋಗುತ್ತಿದ್ದಂತೆ, ಗುಹೆಯ ಒಳಗಿನ ಶಿಲೆಗಳಲ್ಲಿ ಉಚ್ಚರಿಸಲಾಗದ ಪ್ರಾಚೀನ ಲಿಪಿಗಳು ಗೋಚರವಾಗುತ್ತಿದ್ದವು. ನನ್ನ ದೃಷ್ಟಿಗೆ ಬಿದ್ದದ್ದು ಮಾತ್ರ ಒಂದು ಬೃಹತ್ ಪೆಟ್ಟಿಗೆ. ಕಂಚಿನಲ್ಲಿ ಮಾಡಲಾಗಿದ್ದ ಆ ಸುಂದರವಾದ ಪೆಟ್ಟಿಗೆಯ ಮೇಲೆ ಬ್ರಹ್ಮ ಲಿಪಿಯಲ್ಲಿ ಬರೆಯಲಾಗಿತ್ತು:
"ನೀನು ಈ ಪ್ರಪಂಚದ ಕತ್ತಲೆಯನ್ನು ಸೋಲಿಸಬೇಕಾದವನು."
ಆ ಪೆಟ್ಟಿಗೆಯನ್ನು ತೆರೆಯಲು ಪ್ರಯತ್ನಿಸಿದೆವು. ಹೇಮಂತನಿಗೆ ಸಾಧ್ಯವೇ ಆಗದ ಕೆಲಸ ನನ್ನ ಕೈಯಿಂದ ಸಾಧ್ಯವಾಯಿತು. ವಿಚಿತ್ರ ಎನಿಸಿ ರೋಮಾಂಚನವಾಯಿತು. ತೆರೆದ ಆ ಪೆಟ್ಟಿಗೆಯ ಒಳಗೆ ಒಂದು ಹೊಳೆಯುವ ಖಡ್ಗ ಮತ್ತು ಗ್ರಂಥ ನನ್ನ ಜೀವನದ ದಿಕ್ಕು ಬದಲಾಯಿಸುವುದಾಗಿತ್ತು. ಈ ಸಾಧನಗಳು ನನ್ನ ಬದುಕಿನಲ್ಲಿ ಏನನ್ನು ಬದಲಾಯಿಸುತ್ತವೆ ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿತ್ತು. ಆ ಖಡ್ಗ, ಸೂರ್ಯನ ಬೆಳಕಿನಂತೆ ಹೊಳೆಯುತ್ತಿತ್ತು. ಮತ್ತು ಆ ಗ್ರಂಥದ ಮೊದಲ ಪುಟದಲ್ಲಿ ಹೀಗೆ ಬರೆಯಲಾಗಿತ್ತು:
"ನೀನು ಈ ಜ್ಞಾನವನ್ನು ಪಡೆದು, ಅನ್ಯಾಯವನ್ನು ಸೋಲಿಸಬೇಕು. ಇಲ್ಲವೇ ನಿನ್ನ ಪ್ರೀತಿಯ ಈ ಊರಿನಿಂದ ತಲೆಮರೆಸಬೇಕು."
ನನ್ನೊಳಗಿನ ಹೆದರುವ ಜ್ವಾಲೆಗೂ, ಈ ಗ್ರಂಥದ ಸತ್ವಶಕ್ತಿಗೂ ನಡುವೆ ಒಂದು ಘರ್ಷಣೆ. ಆದರೂ, ನಾನು ಈ ಚಿನ್ನದ ಖಡ್ಗಯನ್ನು ಹಿಡಿಯಬೇಕೆಂದು ತೀರ್ಮಾನಿಸಿದೆ. ನನ್ನ ಬೆನ್ನುಹುರಿಯಲ್ಲಿ ಇರುವ ಶಕ್ತಿ ತುಂಬಿ, ನಾನು ಪೆಟ್ಟಿಗೆಯಿಂದ ಖಡ್ಗಯನ್ನು ಹೊರತೆಗೆದೆ. ಹೊಸ ಆತ್ಮಶಕ್ತಿಯೊಂದಿಗೆ ಹೊರಬಂದೆ. ಖಡ್ಗದ ಮೂಲಕ ನನಗೆ ಒಂದು ವಿಶೇಷ ಶಕ್ತಿ ದೊರೆತಂತಾಗಿ ನನಗೆ ಊರಿನ ಭವಿಷ್ಯದ ದೃಷ್ಟಾಂತವು ತೋರಿಸಿತು. ನಮ್ಮ ಊರಿನ ಜನರು ಅನ್ಯಾಯದಿಂದ ಪೀಡಿತರಾಗಿದ್ದರು. ನಾನು ಹೇಮಂತ ಮತ್ತು ಊರಿನ ಇನ್ನೂ ಕೆಲವು ಮಾನ್ಯರನ್ನು ಸೇರಿಸಿಕೊಂಡು, ನಾವು ಕಳ್ಳರು, ರಾಜಕಾರಣಿಗಳು ಹಾಗೂ ಗೋಭಕ್ಷಕರನ್ನು ಎದುರಿಸಲು ತಯಾರಾದೆವು. ಮೊದಲು ಊರಿನ ಜನರ ಭಯವನ್ನು ತೊಡೆದು ಹಾಕಲು ಸಾಧ್ಯವಿಲ್ಲ ಎಂದು ನನಗೆ ಅರ್ಥವಾಗಿತ್ತು. ಹೀಗಾಗಿ ನಾನು ಅವರ ಮಧ್ಯೆ ನಿಂತು - "ನಮ್ಮ ಊರಿನಲ್ಲಿ ಮೊದಲು ನೀವೆಲ್ಲರೂ ನಿಮ್ಮ ಭಯವನ್ನು ತೊಡೆದು ಹಾಕಬೇಕು," ಎಂದೆ. "ನಿಮ್ಮಲ್ಲಿರುವ ಅಪಾರ ಶಕ್ತಿಯನ್ನು ಮರೆತುಬಿಡಬೇಡಿ. ಇದು ನಮ್ಮ ನಾಡು, ನಮ್ಮ ಹಕ್ಕು, ಮತ್ತು ಅದನ್ನು ಉಳಿಸುವ ಜವಾಬ್ದಾರಿ ನಮ್ಮದು." ಧೈರ್ಯ ಪಡೆದುಕೊಂಡ ಜನರು ನನ್ನ ಬೆಂಬಲದಲ್ಲಿ ಬಲವಾಗಿರಲು ನಿರ್ಧರಿಸಿದರು.
ಮರುದಿನವೇ, ನಾವೆಲ್ಲರೂ ಜೊತೆ ಸೇರಿ, ಕಳ್ಳರ ಗುಂಪಿನ ನಾಯಕನಿಗೆ ಸವಾಲು ಹಾಕಿ, "ನೀನು ಈ ಊರಿನ ನೈಸರ್ಗಿಕ ಸಂಪತ್ತನ್ನು ಹಾಲು ಮಾಡಿದೆ ಅಲ್ಲವೇ? ಈಗ ನೀನು ನಮ್ಮ ಸತ್ಯದ ಮುಂದೆ ಶರಣಾಗು," ಎಂದೆ. ನಾನು ಹಿಡಿದಿದ್ದ ಖಡ್ಗದ ಬೆಳಕು ನನ್ನ ನಂಬಿಕೆಯನ್ನು ಪ್ರತಿನಿಧಿಸುತ್ತಿತ್ತು. ಅನೇಕ ಗಂಟೆಗಳ ಸಂವಾದ, ಸವಾಲು, ಮತ್ತು ಖಡ್ಗದ ಶಕ್ತಿಯಿಂದ ಉಂಟಾದ ಪರಿಣಾಮದಿಂದ, ಕಳ್ಳರು ನಮ್ಮ ಗ್ರಾಮವನ್ನು ಬಿಟ್ಟು ಹೋದರು. ರಾಜಕಾರಣಿಗಳ ಸಹಾಯದಿಂದ ನೈಸರ್ಗಿಕ ಸಂಪತ್ತನ್ನು ಪುನಃ ನವೀಕರಿಸಲಾಯಿತು. ಗೋಭಕ್ಷಕರು ಭಯದಿಂದ ನಡುಗಿ, ಸಸ್ಯಾಹಾರಿಗಳಾಗಿ ಪರಿವರ್ತನೆಯಾದರು. ಊರಿನ ಜನರಲ್ಲಿ ನಂಬಿಕೆ ಮತ್ತು ಬಲ ಮತ್ತೆ ಮೂಡಿತು.
ಇಂದು, ದೊಡ್ಡ ಹುಣಸೆ ಮರ ಕೇವಲ ನಮ್ಮ ಬಾಲ್ಯದ ನೆನಪುಗಳೇ ಅಲ್ಲ, ಅದು ಈಗ ನಮ್ಮ ಹೋರಾಟದ ಸಂಕೇತವಾಗಿದೆ. ಈ ಅವಸಾನ ನಮ್ಮೊಳಗಿನ ಅನ್ಯಾಯದ ವಿರುದ್ಧ ಹೋರಾಡುವ ಶಕ್ತಿ ಉಳಿಸಿದೆ. ನಾನು ಊರಿನಿಂದ ಹೊರಡುವ ಮುನ್ನ ಮತ್ತೆ ಮರದ ಮುಂದೆ ನಿಂತು ತಲೆ ಎತ್ತಿ ನೋಡಿದೆ. ಅದು ಅಂದಿನಂತೆ ಶಕ್ತಿಯ ಚಿಹ್ನೆಯಾಗಿ ನಳನಳಿಸುತ್ತಿತ್ತು. ಶಾಂತಿಯ ಸಂಕೇತವಾಗಿ ನೆಮ್ಮದಿಯ ಗಾಳಿ ಬೀಸುತ್ತಿತ್ತು. ಸವಣೂರು ಈಗ ಶಾಂತ, ಸಶಕ್ತ, ಮತ್ತು ಹೊಸ ಆಕರ್ಷಣೆಗಳಿಗೆ ಮನೆಮಾಡಿದೆ. ಈಗ ನಾನು ಎಲ್ಲಿಯೇ ಹೋಗಿ ನೆಲೆಯಾದರೂ, ಈ ಮರದ ನೆರಳಿನಲ್ಲಿ ನನ್ನ ಹೃದಯವನ್ನು ಉಳಿಸಿರುತ್ತೇನೆ.
✍🏻 *Deepalaxmi Bhat*
Mangaluru
No comments:
Post a Comment