Friday, February 10, 2017

ನಾನು

ಕನಸುಗಳ ಒಡೆದೋಡಿತು "ನಾನು"
ಮನಸುಗಳ ಮುದುಡಿಸಿತೀ "ನಾನು"
ಸತ್ಯಾಸತ್ಯಗಳ ಅಂಧತೆಯೇ ಏನು!
ವಿಷದಂತೆ ವಧಿಸುವ ಈ "ನಾನು"

ದರ್ಪದ ಪರಾಕಾಷ್ಠೆಯಲಿ ನೀನು
ನಿನ್ನುಗಮವ ಮರೆತೆಯೇನು?
ಬುಡದ ಮಹಿಮೆಯಿಂದಲೇ ನೀನು
ಪಡೆದಿರುವೆ ಈ ಸುಖಭೋಗವನು.

ಎಷ್ಟು ಮೇಲೇರಿದರೂ ಇಂದು ನೀನು
ಅಹಂವಶದಿ ಇತ್ತರೆ ಬುದ್ಧಿಯನು
ಆಮಂತ್ರಿಸಿದಂತೆ ನೀನೇ ಕೇಡನು
ಮಣ್ಣಲಿ ಮಣ್ಣಾಗುವ ಕಾಲವನು.

"ನಾನೇ" "ನನ್ನಿಂದಲೇ" ಎಂಬ ಭಾವವನು
ತೊರೆದು ಆಲಂಗಿಸು ಸೌಮ್ಯತೆಯನು
ನಿನ್ನ ವಿನಯತೆಯಿಂದಾರ್ಜಿಸು ನೀನು
ಬದುಕಿನ ನಿಜವಾದ ಅರ್ಥವನು...

No comments:

Post a Comment