Sunday, March 2, 2014

ಕಷ್ಟ ಬಂದಾಗ ಇಂದು

ಜೀವನವೆಂಬೋ ಮಹಾಮಾರ್ಗದಿ, ಇರುವುದೇ ಅಲ್ಲವೇ ಏರು-ತಗ್ಗು
ಎರಬೇಕಾದಾಗ ನೋಡಿ ಈ ಜಗದಿ, ಜೀವನದ ಉನ್ನತ ಶಿಖರವನ್ನು
ಖುರಾನ್- ಗೀತೆ- ಬೈಬಲ್'ಗಳಲಿ, ಇರುವುದೊಂದೇ ತಾನೇ ಸಾರ
ಯಾವ ಕಷ್ಟ ನಷ್ಟ ಅನುಭವಿಸಿದರೂ, ನಡೆಯಬೇಕು ಸನ್ಮಾರ್ಗದಲಿ

ಒಬ್ಬನ ಮನದ ಸಂಕಷ್ಟಗಳನು, ಅರಿಯುವವರಾರೂ ಇಲ್ಲ ಈ ಜಗದಿ
ಬಡಿದಿರಲು ಜನರೆಲ್ಲರ ಆತ್ಮಕ್ಕೂ, "ಸ್ವಾರ್ಥ- ಅಹಂಕಾರ"ಗಳೆಂಬ ಪೆಡಂಭೂತ
ಬಂದೊದಗಿದರೆ ಒಬ್ಬನಿಗೆ ಕಷ್ಟ, ನಕ್ಕು ನಲಿದಾದುವವರೇ ಜಾಸ್ತಿ
ನೆರವಾದರೆ ಅವರಿಗದೆನು ನಷ್ಟ, ಕುಂಠಿತಗೊಂಡಾಗ ಸಂತೋಷದ ಆಸ್ತಿ

ಇಂದಿನ ಈ ಕಲಿಯುಗದಲಿ, ತಪ್ಪಿಲ್ಲದವನಿಗೂ ದೊರೆವುದು ಶಿಕ್ಷೆ
ಬೈಗಳು- ಅಪವಾದಗಳ ಸುರಿಮಳೆ, ಇರಲಾರದೇ ಆತನಿಗೆ ರಕ್ಷೆ?
ಬಂದಾಗ ಕಷ್ಟಗಳ ಸುರುಳಿ, ನಡೆಯಬೇಕು ಮುಂದೆ ಎದೆಗುಂದದೆ
ಯಾರ ಸಹಾಯಕ್ಕೂ ಕೈಯೊಡ್ದದೆ, ಸಾಗಬೇಕು ಮುಂದೆ ಮುಂದೆ

ಹಾಗಾದರೆ ಮಾತ್ರವೇ ಸಾಧ್ಯ, ದೊರೆಯಲು ಜೀವನದಿ ಸಿದ್ಧಿ
ವಿಚಾರ ಮಾಡದೆ ಮನನೊಂದರೆ, ದೊರೆಯಲಾರದು ಎಂದಿಗೂ ಬುದ್ಧಿ
ಆದುದರಿಂದಲೇ ದೇವರಲಿ ಹೇಳಿ, ನಿಮ್ಮಯ ಸಂಕಷ್ಟಗಳನು
ಹಗುರವಾದಾಗ ಮನದ ನೋವು, ಪಡೆಯುವಿರಿ ಸುಖ ಕ್ಷಣಗಳನು

ಕಷ್ಟಗಳಿಗೆ ಪರಿಹಾರ ನೀಡಲು, ಸಾಧ್ಯ ಕೇವಲ ಭಗವಂತನಿಗೆ
ಜೀವನ ನೀಡಿದ ಆ ಶಕ್ತಿಯು ಮಾತ್ರ, ಮರುಕಳಿಸಬಲ್ಲದು ಸಂತೋಷವ
ಒಬ್ಬನ ಮನದ ವಿಚಾರಗಳನು, ಅರ್ಥೈಸುವವರಾರೂ ಇಲ್ಲ
ವಿಚಾರ ನೀಡಿದ ಆ ಶಕ್ತಿಗೆ ಮಾತ್ರ, ಅರ್ಥವಾಗುವುದು ಆ ಚಿಂತನ

ಹಾಗಾಗಿ ನಿಮ್ಮೆಲ್ಲರ ಕಷ್ಟಗಳನು, ಮನದೊಳಗಿಟ್ಟು ಕೊರಗದಿರಿ
ದೇವರ ಮುಂದೆ ನಮ್ರತೆಯಿಂದಿಟ್ಟು , ಸಫಲರಾಗಿರಿ ನಿಮ್ಮ ಜೀವನದಿ.

No comments:

Post a Comment