Sunday, March 2, 2014

ಎಂಥ ಮಹಾತ್ಮ ನಮ್ಮ ಬಾಪೂಜಿ

ಮಕ್ಕಳ ನೆಚ್ಚಿನ ಬಾಪೂಜಿ
ನಗುಮುಖ ಅರಳಿದ ಗಾಂಧೀಜಿ
ತುಂಡು ಪಂಚೆಯು ಸೊಂಟದಿ
ಕನ್ನಡಕವೊಂದಾ ನಯನದಿ
ಆಧಾರಗೋಲದು ಕೈಯಲಿ
ತ್ಯಾಗಭಾವನೆಯೇ ಮನದಲಿ

ಸಾಧನೆಯದನೇಕ ಮಾಡಿಹರು
ಸಾಮಾನ್ಯರಂತೆ ತೋರಿದರೂ
ಹೊಂದಲು "ಬ್ಯಾರಿಸ್ಟರ್" ಇಂಗ್ಲೆಂಡಲಿ
ವಕೀಲರಾದರೂ ದಕ್ಷಿಣ ಆಫ್ರಿಕಾದಲಿ
ನಡೆಸಿದರಲ್ಲಿ ಕರಿಜನರಿಗಾಗಿ
ಹೋರಾಟ ನಾಗರಿಕ ಹಕ್ಕುಗಳಿಗಾಗಿ

ಮರಳಲು ಪಡೆದರು ಸ್ವದೇಶದಿ
ನಾಯಕತ್ವವ ತಿಲಕರ ನಂತರದಿ
ಬ್ರಿಟಿಷರು ನಡೆಸಿದ ಶೋಷಣೆಗಳಿಂದ
ಭಾರತವು ನರಳಿತು ಬಡತನದಿಂದ
ತೊಲಗಿಸಲದನು ಪ್ರಚಾರಿಸಿದರವರು
ಸತ್ಯಾಗ್ರಹ ಮತ್ತು ಅಸಹಕಾರ ಚಳುವಳಿಗಳನು

ಹೋರಾಡಿದರು ಸ್ವದೇಶದ ಸ್ವಾತಂತ್ರ್ಯಕಾಗಿ
ದೇಶಾದ್ಯಂತ ಜನಜಾಗೃತಿಯ ನಿರ್ಮಿಸಲಿಕಾಗಿ
ನಾಯಕರ ಒಗ್ಗಟ್ಟಿಗಾಗಿ ಪ್ರೇರೇಪಿಸಿದರು
"ಏನೇ ಬರಲಿ ಒಗ್ಗಟ್ಟಿರಲಿ" ಎಂದು ಘೋಷಿಸಿದರು
"ಅಹಿಂಸಾ ಪರಮೋಧರ್ಮ" ಎಂದು ಸಾರಿದರು
"ರಾಮರಾಜ್ಯ" ಸ್ಥಾಪನೆಯ ಕನಸನು ಕಂಡರು

ನಿಯಮನಿಷ್ಠೆ - ಶಿಸ್ತು - ಸಂಯಮ ಹೊಂದಿ
ದೇವರ ಭಕ್ತಿ ಭಜನೆಗಳ ಮಹತ್ವ ಸಾರಿ
ನಡೆಸಿ ಪತ್ರಿಕೋದ್ಯಮ, ಪ್ರಕೃತಿಚಿಕಿತ್ಸೆ, ಗ್ರಾಮೋದ್ಯೋಗ
ಸ್ವದೇಶೀ ಶಿಕ್ಷಣ - ಯೋಜನೆಗಳ ಪ್ರಯೋಗ
ಭಾರತವ ಸ್ವತಂತ್ರಗೊಳಿಸಿದ ಬಾಪೂ
ನಿಮಗಿದೋ ಶತಕೋಟಿ ನಮನ...

No comments:

Post a Comment