ಮಂಗಳವಾರ, ಏಪ್ರಿಲ್ 28, 2015

ದಾರಿ ಕಾಣದಾಗಿದೆ...

ಕರಾಳ ರಾತ್ರಿಯ ಇರುಳು
ಕದಡಿ ಹೋಗಿದೆ ಮನದ ಕಡಲು
ಬೆಳಕಿರದ ನಾಡಿನ ಮಡಿಲು
ಭಯದಿಂದ ಕುಸಿದಿದೆ ನನ್ನೊಡಲು...

ಸ್ವತಂತ್ರವಾಗಿ ಹಾರಾಡುತ್ತಿದ್ದ ಹಕ್ಕಿಯು
ಗರಿಯ ತುಂಡರಿಸಿದಂತೆ ಒದ್ದಾಡುತಿದೆ
ಖುಷಿಯಿಂದ ಈಜುತ್ತಿದ್ದ ಮತ್ಸ್ಯವು
ನೀರಿಲ್ಲದ ದಡದಿ ವಿಲವಿಲನೆ ನರಳುತ್ತಿದೆ...

ಈ ಮನದ ನೋವನು ಇಂದು
ಅರಿತುಕೊಳ್ಳುವರಾರೂ ಇಲ್ಲ...
ಈ ಮನಕೆ ಮುದ ನೀಡುವ
ಜನರ ಸಂಪರ್ಕವೇ ಇಲ್ಲ...

ದಟ್ಟ ಕಾನನದ ನಡುವೆ ಬೆಳಕಿರದೆ
ದಾರಿ ಕಾಣದಂತೆ ಹುತಿಯಾಗಿದೆ
ಈ ಮನಸಿಗೆ ಸಾಂತ್ವನ ಬೇಕಿಂದು
ಸಿಗಲಾರದೆ ಮುದುಡಿದ ತಾವರೆಯಂತಾಗಿದೆ...

 (೧೦-೦೩-೨೦೧೪)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ