Thursday, October 12, 2017

ಮನದ ದೌರ್ಬಲ್ಯತೆ

ಮನದ ಚಂಚಲತೆಗೆ ಬಲಿಯಾಗಿ
ದಿನದ ಸಮಚಿತ್ತವ ಕಳೆದು
ಪ್ರಶ್ನೆಗಳ ಲೋಕದಲಿ ಅಲೆದು
ಕಂಗೆಟ್ಟಿದೆ ಚಾತುರ್ಯತೆಯು ಇಂದು

ಕಳೆದುಕೊಂಡ ಸ್ಥಿಮಿತವ ನೆನೆದು
ದುಃಖಿತ ಕಂಗಳಲಿಳಿಯದೆ ಕಣ್ಣೀರು
ಭಾರವಾಗಿಸಿದೆ ಹೃದಯದ ಕವಲು
ತಡೆಯಲಾರದೆ ನೋವನಿಂದು

ಕಾಣದ ಹಾದಿಯಲಿ ನಡೆದು
ತಿಳಿಯದ ಗುರಿಯನು ಬಯಸಿ
ಆಕಾಂಕ್ಷೆಗಳ ಹುರಿದುಂಬಿಸುತ
ಚಡಪಡಿಸುತಿದೆ ಮನವು ಇಂದು

ಯಾಕೆ ಹೀಗಾಗುತಿದೆ ಎಂಬುದನು
ಅರಿತು ತೋರು ಸರಿದಾರಿಯನು
ಮಾರ್ಗದರ್ಶಿಯಾಗು ನೀ ಮನಕೆ
ಮಂಕಾಗಿ ಧ್ರೃತಿಗೆಡಬೇಡ ನೀನಿಂದು...

No comments:

Post a Comment